Hot Posts

10/recent/ticker-posts

ಅಕ್ರಮ ಗಣಿಗಾರಿಕೆ ಸಾಬೀತಾದ್ರೆ ಬಹಿರಂಗವಾಗಿ ನನ್ನ ನೇಣು ಹಾಕಿ: ಜನಾರ್ಧನ ರೆಡ್ಡಿ

ನಾವು ಕರ್ನಾಟಕದಲ್ಲಿ ಒಂದು ಅಡಿಯೂ ಗಣಿಗಾರಿಕೆ ನಡೆಸಿಲ್ಲ. ಅಕ್ರಮ ಗಣಿಗಾರಿಕೆ ನಡೆಸಿರುವುದು ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣಿಗೆ ಶರಣಾಗುತ್ತೇನೆ ಎಂದು ಜನರ್ಧನ ರೆಡ್ಡಿ ಬಹಿರಂಗವಾಗಿ ಸವಾಲೆಸೆದಿದ್ದಾರೆ. ಕಾಂಗ್ರೇಸ್ ಬಳ್ಳಾರಿಯನ್ನು ನಿರ್ಲಕ್ಷ ಮಾಡಿತ್ತು. ಬಿಜೆಪಿಯಿಂದ ಬಳ್ಳಾರಿಯ ಅಭಿವೃದ್ಧಿಯಾಗುತ್ತಿದೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ನಮ್ಮ ವಿರುದ್ಧ ಇಂಥ ತಂತ್ರ ಮಾಡುತ್ತಿದೆ ಕಾಂಗ್ರೇಸ್ ಗೆ ನಾಚಿಕೆ ಇಲ್ಲ. ಎಂದು ಜನಾರ್ಧನ ರೆಡ್ಡಿ ಹೇಳಿದರು. ಬಳ್ಳಾರಿಯ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಚಿವರು ಆರೋಪವನ್ನು ಸಾಬೀತು ಪಡಿಸುವಂತೆ ಪ್ರತಿಪಕ್ಷಗಳಿಗೆ ಬಹಿರಂಗವಾಗಿ ಸವಾಲೆಸೆದರು.

Отправить комментарий

0 Комментарии