ನಮ್ಮ ಜನ ಎಷ್ಟು ಅಮಾಯಕರು ಅಂದ್ರೆ ಸ್ವಂತ ಅವರ ಮಕ್ಕಳು ಹುಟ್ಟಿದರೆ ಅವರು ಸಂತೋಷ ಪದ್ಥರೋ ಇಲ್ವೋ ಗೊತ್ತಿಲ್ಲ.. ಆದ್ರೆ ಐಶ್ವರ್ಯ ರೈ ಗೆ ಮಗು ಆಗ್ತಾ ಇದೆ ಅಂದ್ರೆ ಒಂದು ತಿಂಗಳು ಕಣ್ಣು ಬಾಯಿ ಬಿಟ್ಕೊಂಡು ಕೂತಿದ್ದಾರೆ... ಯಾಕೆ ಇಂಥ ನಿರೀಕ್ಷೆ...? ಅವಳಿಗೆ ಮಗು ಆದರೆ ಇವರಿಗೇನು ಲಾಭ...? ಅವಳಿಗೆ ಮಗು ಆಗುವುದರ ಬಗ್ಗೆ ನಮ್ಮ ಮಾಧ್ಯಮಗಳೂ ವಿಚಿತ್ರ ಆಸಕ್ತಿಯನ್ನು ಬಿಂಬಿಸುತ್ತಿವೆ.. ಇದು ನಿಜಕ್ಕೂ ದುರಾದೃಷ್ಟ... ಸಮಾಜದ ಆಗು ಹೋಗುಗಳನ್ನು ಬಿತ್ತರಿಸುವವರೇ ಸಮಾಜಕ್ಕೆ ಅಷ್ಟೊಂದು ಅಗತ್ಯವಲ್ಲದ ವಿಷಯಗಳನ್ನುದೊಡ್ಡ ಸುದ್ದಿ ಮಾಡುವ ಅಗತ್ಯವಿರಲಿಲ್ಲ. ನಮ್ಮ ದೇಶದಲ್ಲಿ ಕೋಟಿ ಕೋಟಿ ಅನಾಥ ಮಕ್ಕಳು ಇದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಟ ಪಡುವ ಜನರಿದ್ದಾರೆ... ಅವರ ಬಗ್ಗೆ ನೀವು ಯಾರದ್ರು ಚಿಂತೆ ಮಾಡಿದ್ದೀರಾ...? ಇನ್ನು ಮುಂದೆ ಅದರೂ ಅವರ ಭವಿಷ್ಯದ ಬಗ್ಗೆ ಚಿಂತೆ ಮಾಡಿ. ಯಾರಿಗೆ ಮಕ್ಕಳು ಆದ್ರೆ ನಮಗೇನು...? ಮೊದಲು ನಮ್ಮ ಮಕ್ಕಳನ್ನು ನಾವು ನಾವು ಚೆನ್ನಾಗಿ ಬೆಳೆಸಬೇಕು. ಅವರಿಂದ ದೇಶದ ಭವಿಷ್ಯ ಉಜ್ವಲ ಮಾಡುವ ಕನಸನ್ನು ನಾವು ಕಾಣೋಣ...!!
0 Комментарии