Hot Posts

10/recent/ticker-posts

ಸ್ಟಾರ್ ಅಬ್ಬರ..!!

ಮುಂದಿನ ವಾರ ಅಂದ್ರೆ ಎಪ್ರಿಲ್ ಆರನೇ ತಾರೀಕು ಕನ್ನಡದಲ್ಲಿ ಎರಡು ಸಿನೆಮಾಗಳು ತೆರೆಗೆ ಬರಲು ಸಿಧವಾಗಿವೆ.. ಒಂದು ದುನಿಯಾ ವಿಜಯ್ ಅಭಿನಯದ ಭೀಮಾ ತೀರದಲಿ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಬಹು ನಿರೀಕ್ಷಿತ ಚಿತ್ರ ಕ್ರೇಜಿ ಲೋಕ... ಭೀಮ ತೀರದಲಿ ಅನ್ನೋ ಸಿನೆಮಾ ಚಂದಪ್ಪ ಹರಿಜನ ಎಂಬ ವ್ಯಕ್ತಿಯ ಜೀವನವನ್ನು ಆಧರಿಸಿದೆ.. ಈತನು ತನ್ನ 34 ನೆಯಸ್ ವಯಸ್ಸಿನಲ್ಲಿ ಅಪರಾಧ ಚಟುವಟಿಕೆಯಲ್ಲಿ ಎನ್ಕೌನ್ತೆರ್ ಆಗತಾನೆ.. ಆದ್ರೆ ಅವನು ನಿಜವಾಗಲು ಏನು ತಪ್ಪು ಮಾಡಿದ್ದಾನೆ..? ಭೀಮಾ ತೀರದಲ್ಲಿ ಏನು ನಡೆದಿದೆ..? ಅನ್ನುವಂಥ ಎಲ್ಲಾ ವಿಷಯಗಳ ಮೇಲೆ ಸಿನೆಮ ಬೆಳಕು ಚೆಲ್ಲುತ್ತೆ.. ಅಷ್ಟೇ ಅಲ್ಲ ಭೀಮಾತೀರದಲಿ ಸಿನೆಮಾದ ಇನ್ನೊಂದು ವೈಶಿಷ್ಟ್ಯ ಏನಪ್ಪಾ ಅಂದ್ರೆ, ಬಿ.ಜೆ.ಪಿ. ಅಬಕಾರಿ ಮಂತ್ರಿ ರೇಣುಕಾಚಾರ್ಯ ಕೂಡ ಕೆಲವು ಸೀನ್ ನಲ್ಲಿ ಬಂದು ಹೋಗ್ತಾರೆ... ಸಿನೆಮಾವನ್ನು ನಿರ್ದೇಶನ ಮಾಡಿರೋದು ಖ್ಯಾತ ನಿರ್ದೇಶಕರಾದ ಓಂ ಪ್ರಕಾಶ್ ರಾವ್.. ಮತ್ತು ನಿರ್ಮಾಣ ಮಾಡಿರೋದು ಅಣಜಿ ನಾಗರಾಜ್. ಚಿತ್ರದಲ್ಲಿ ಭೀಮಾ ತೀರದ ವ್ಯಕ್ತಿಯಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಭೀಮಾ ತೀರದ   ವಿಭಿನ್ನ  ಗೆಟಪ್ ಅನ್ನು ನೀವು ನೋಡಬೇಕು ಅಂದ್ರೆ ಮುಂದಿನ ವಾರದವರೆಗೂ ತಡಿಬೇಕು.






ಇದರ ಜೊತೆಗೆ ಮುಂದಿನವಾರ ಖ್ಯಾತ ಬರಹಗಾರ್ತಿ ಮತ್ತು ನಿರ್ದೇಶಕಿ ಕವಿತಾ ಲಂಕೇಶ್ ನಿರ್ಮಾಣದ ಕ್ರೇಜಿ ಕ್ರೇಜಿ ಲೋಕ ಮುಂದಿನ ವಾರ ಬಿಡುಗಡೆಯಾಗಲಿದೆ.. ಎರಡೂ ಸಿನೆಮಾಗಳು ಮುಂದಿನವಾರ ತೆರೆಗೆ ಅಪ್ಪಳಿಸಲಿದ್ದು  ಪ್ರೇಕ್ಷಕ ಕ್ರೇಜಿ ಲೋಕದಲ್ಲಿ ತೆಳುತಾನ ಅಥವಾ ಬೇಸಿಗೆಯಲ್ಲಿ ಭೀಮಾ ತೀರಕ್ಕೆ ಹೋಗಿ  ತಣ್ಣೀರು ಸ್ನಾನ ಮಾಡಿ ಕೂಲ್ ಆಗತಾನ ಅಂತ ಮುಂದಿನವಾರ ಗೊತ್ತಾಗುತ್ತೆ,


Отправить комментарий

0 Комментарии