ಕ್ರಿ.ಪೂ 563 ರಲ್ಲಿ ವೈಶಾಖ ಮಾಸದ ಹುಣ್ಣಿಮೆ ದಿನದಂದು ಸಿದ್ದಾರ್ಥ ಎಂಬ ಹೆಸರಿನಲ್ಲಿ ಗೌತಮ ಬುದ್ಧನು ಜನಿಸಿದನು.. ಅದೊಂದು ದಿನ ವಿಹಾರಕ್ಕೆಂದು ಹೊರಟಾಗ, ಒಬ್ಬ ರೋಗಿ, ಒಬ್ಬ ವೃದ್ಧ ಒಂದು ಹೆಣವನ್ನು ನೋಡಿ ಜೀವನದ ಬಗ್ಗೆ ಜಿಗುಪ್ಸೆಗೊಂಡು ತಪಸ್ಸನ್ನಾಚರಿಸಲು ಹೊರಟನು. ಬೋದೀ ವೃಕ್ಷದ ಕೆಳಗೆ ತಪಸ್ಸು ಮಾಡುವಾಗ ಬುದ್ಧನಿಗೆ ಜ್ಞಾನೋದಯವಾಯಿತು. ಆಸೆಯೇ ದುಃಖಕ್ಕೆ ಮೂಲ ಎಂದು ಪ್ರತಿ ಪಾದಿಸಿದನು. ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಬುದ್ಧ ಜನಿಸಿದ ದಿನವನ್ನು ಬುದ್ಧ ಪೂಣಿಮೆ ಎಂಬುದಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆ ಬರುತ್ತದೆ.
0 Комментарии