ಸೋಮ – ನನ್ ಹೆಂಡ್ತಿ ಸೀತೆ.. ಸಾವಿತ್ರಿ.. ಅಹಲ್ಯೆ... ಎಕ್ಸೆಟ್ರಾ ಎಕ್ಸೆಟ್ರಾ... ಥರ ಇರಬೇಕು ಅಂತ ಆಸೆ ಪಟ್ಟಿದ್ದೆ.. ಆದ್ರೆ ನಂಗ್ ಸಿಕ್ದೋಳು ಬರಿ ಎಕ್ಸ್ ಟ್ರಾ.. ಎಕ್ಸ್ ಟ್ರಾ ಇರೋ ಹೆಂಡ್ತಿ.. ೫೦ ಕೆ ಜಿ ಹೆಂಡ್ತಿ ಸಿಗೋ ಬದಲು ಎಕ್ಸ್ಟ ಟ್ರಾ ೫೦ ಕೆ ಜಿ ಇರೋ ಹೆಂಡ್ತೀನ್ ಕೊಟ್ಟ ಆ ದೇವ್ರು..
ದೇವರು – ಮಗನೇ.. ನೀನು ಕೇಳಿದ್ದು ಎಕ್ಸ್ ಟ್ರಾ ಇರೋ ಹೆಂಡ್ತಿ ಕೊಡು ಅಂತ ಕೇಳ್ದಲ್ಲ.. ಅದಿಕ್ಕೆ ಈ ಎಕ್ಸ್ ಟ್ರಾ ಟಾಕ್ ಟೈಮ್ ಕೊಟ್ಟಿದೀನಿ..
ಸೋಮ – ನಮ್ಮನೇಲ್ ಮೂರ್ ಇದ್ಯಾ?... ಒಂದ್ ಕೆಲಸ ಮಾಡು.. ಎದುರು ಮನೇವ್ರುದು ನಾಕ್ ಕೋಳಿ ಇದೆ.. ಅದನ್ನೇ ಒಂದ್ ಎತ್ತಾಕೊಂಡ್ ಬಂದ್ ಸಾರ್ ಮಾಡು -\
ರಂಗೀಲ- ರೀ ಅದು ತಪ್ಪಲ್ವಾ?
ಸೋಮ – ಲೇ.. ಯಾವುದೇ ತಪ್ಪು..?? ತಪ್ಪು ಸರಿ ಯಾವುದು ಅಂತ ನಂಗೂ ಗೊತ್ತೈತೆ.. ಸಂವಿಧಾನದ ಪ್ರಕಾರ ಎದುರು ಮನೆಯವರ ಕೋಳೀನ ನಾವು ತಿನ್ನಬಹುದು ಕಣೆ.. ನೈಟಾಗೆ ಇಸ್ಕೂಲ್ ಹೋಬಗ್ಬುಟ್ಟು ತಿಳ್ಕೊಂಡಿದೀನಿ ನಾನು..
ಸೋಮ – ಬಾರ್ಲಾ ಇಲ್ಲಿ... ನೋಡು..... ಉದಯ ಟೀವೀಲಿ ಬಂಗಾರ.. ಈ ಟೀವೀಲಿ ....................... ಜೀ ಟೀವೀಲಿ........ ಇಷ್ಟೆಲ್ಲಾ ಬೊಂಬಾಟ್ ಸೀರಿಯಲ್ ಗಳು ಬರ್ತಾವೆ.. ಫ್ಯಾಮಿಲಿ ಪೂರ್ತಿ ಅದನ್ ನೋಡ್ಕೊಂಡ್ ಕೂತ್ಕೊಂಡ್ರೆ ಸಾಕು.. ಮೂರ್ ಫಲ ಭತ್ತ ಬೆಳೀಬಹುದು.. ಅಷ್ಟು ನೀರು ಕಣ್ಣಲ್ಲೇ ಸಿಗ್ತದೆ ಕಣ್ಲಾ..
ಚಕ್ರಪಾಣಿ- ನಿಜಾನೇನಣ್ಣ?
ಸೋಮ - ಹೂ ನಲೇ.... ನೆಲದಿಂದ್ ನೀರ್ ತಗಿಯೋಕೆ ಬೋರ್ವೆಲ್ ಬೇಕು.. ಕಣ್ಣಿಂದ್ ನೀರು ತೆಗೀಬೇಕು ಅಂದ್ರೆ ಬರಗೆಟ್ಟ ಊರುಗಳಿಗೆ ಇಂಥಾ ಸೀರಿಯಲ್ ಗಳು ಬೇಕು ಕಣ್ಲಾ.. ಬೇಕು.... ಅಷ್ಟು ಪವರ್ ಐತೆ ಈ ನಮ್ ಸೀರಿಯಲ್ಸ್ ನಲ್ಲಿ..
ಚಕ್ರಪಾಣಿ – ಅಣ್ಣ.. ಈಗ್ ನಂಗ್ ಗೊತ್ತಾಯ್ತಣ್ಣ.... ಈಗ್ ನಂಗ್ ಎಲ್ಲಾ ಗೊತ್ತಾಯ್ತು..
ಚಕ್ರಪಾಣಿ – ಉತ್ತರ ಖಂಡದಲ್ಲಿ ಯಾಕ್ ಅಷ್ಟೋಂದ್ ಪ್ರವಾಹ ಬಂತು ಅಂತ..
ಸೋಮ – ಲೇ ಉತ್ತರ ಖಂಡದಲ್ ಪ್ರವಾಹ ಆಗಿದ್ದಕ್ಕೂ ನಾನ್ ಹೇಳಿದ ಸೀರಿಯಲ್ ಕಥೆಗೂ ಏನ್ಲಾ ಸಂಬಂಧ..
ಚಕ್ರ – ಟೂರ್ ಗೆ ಅಂತ ಬಂದೋರೆಲ್ಲಾ ರಾತ್ರಿ ಬಸ್ಸಲ್ಲಿ ಕೂತ್ಕೊಂಡು ಬಂಗಾರ ಧಾರಾವಾಹಿ ನೋಡ್ಬುಟ್ಟವ್ರೆ.. ಅದನ್ ನೋಡಿ ಎಲ್ರೂ ಗೊಳೋ ಅಂತ ಅಳೋಕ್ ಶುರು ಮಾಡ್ಬಿಟ್ಟವ್ರೆ.. ಕಣ್ಣೀರು ಉಕ್ಕಿ ಪ್ರವಾಹ ಆಗಿ ಎಲ್ರನ್ನೂ ಕೊಚ್ಕೊಂಡು ಹೋಗೈತಣ್ಣ..
MLA ಪಾಂಡು – ತಗೊಳ್ಳಿ ಐನೂರ್ ರೂಪಾಯಿ ನೋಟು.. ಹಾಕಿ ನಿಮ್ಮದು ನಿಮ್ಮ ಮನೆಯವರದ್ದು ಓಟು.. ಓಟ್ ಹಾಕಿದ್ರೆ ಹೆಣ್ಮಕ್ಕಳಿಗೆ ಸೀರೇ ಫಿಕ್ಸು.. ಗಂಡ್ ಮಕ್ಕಳಿಗೆ ಬೀರು ನೀರು ಮಿಕ್ಸು.. ಓಟಾಕಿ.. ಗೆಲ್ಲಿಸಿ..
ಚಲ್ಲಣ್ಣ – ರೈತಾನೇ ದೇಶದ ಬೆನ್ನೆಲುಬು ಸ್ವಾಮಿ.. ಅವನಿಗೆ ಹಿಂಗೆ ಕುಡಿತ ನೋಟು ಅಂತ ಆಸೆ ತೋರಿಸಿ ಓಟ್ ಗಿಟ್ಟಿಸ್ಕೋಬೇಡಿ.. ಎಲ್ರೂ ಕುಡುಕ್ರಾಗಿ ಬಿದ್ದೋದ್ರೆ ಬೆನ್ನೆಲುಬು ಹೆಂಗ್ ಸ್ವಾಮಿ ಇರ್ತದೆ..
ಸೋಮ – ಏನ್ ಸ್ವಾಮಿ... ಗೆಲ್ಲೋವರೆಗೂ ರೈತಾನೇ ಬೆನ್ನೆಲುಬು.. ಅಂತ ಉಬ್ಬಿಸ್ತೀರ.. ಗೆದ್ದ ಮೇಲೆ ಆ ಬೆನ್ನೆಲುಬನ್ನ ಮುರೀತೀರ.. ಗೊಬ್ರ ಕೇಳಿದ್ರೆ ಗೋಲಿಬಾರ್ ಮಾಡಿಸ್ತೀರ.. ಕಾವೇರಿ ನೀರ್ ನ ಬೇರೇಯವರಿಗ್ ಕೊಡ್ತೀರ..ಗೆದ್ರೇ ರೈತನ ಸಾಲ ಮನ್ನ ಮಾಡ್ತೀವಿ ಅಂತೀರ.. ಗೆದ್ಮೇಲೆ ನೈಂಟಿ ಕುಡಿ ಪಲ್ಟಿ ಹೊಡಿ ಅಂತ ಇಧಾನ್ ಸೌದ್ ದಾಗೇನೇ ನಾಯಿ ನರಿಗಳ್ ಥರ ಕಿತ್ತಾಡ್ತಿರ್ತೀರ.. ನಮ್ಮಂಥ ಬಡವರಿಗೆ ಏನ್ ಸ್ವಾಮಿ ಆಗ್ತೈತೆ ನಿಮ್ಮಂಥವರಿಂದ?
MLA (PA)– ಬೆನ್ನೆಲುಬು ಮುರಿದ್ರೆ ಡಾಕ್ಟರ್ ಹತ್ರ ಹೋಗ್ರಯ್ಯಾ.. ನಮ್ ಸಾಯೇಬ್ರು ಎನ್ ಮಾಡಾಗ್ತೈತೆ..?? ನಮ್ ಸಾಯೇಬ್ರೇನು ಡಾಕ್ಟರಾ ಓದವ್ರೆ? ಐದ್ನೇ ಕ್ಲಾಸಲ್ಲಿ ಲಾಸಾಆ ಕಂಡು ಹಿಡಿಯಿರಿ ಅಂತ ಅವರ ಲೆಕ್ಕದ ಮೇಷ್ಟ್ರು ಹೇಳಿದ್ದಕ್ಕೆ ಆವತ್ತು ಸ್ಕೂಲಿಂದ ಓಡಿ ಹೊರಗೆ ಬಂದೋರು ಈವತ್ತಿನ ವರೆಗೂ ಸ್ಕೂಲ್ ಕಡೆ ತಿರುಗಿ ನೋಡಿಲ್ಲ.. ಆವತ್ತಿಂದ ಲಸಾಆ ಕಂಡು ಹಿಡೀತಾವ್ರೆ,.. ಅದು ಇನ್ನು ಸಿಗ್ತಿಲ್ಲ.. ಹಿಂಗಿರುವಾಗ ನಿಮ್ಮ ಬೆನ್ನೆಲುಬಿಗೆ ಅದೇನ್ ತ್ಯಾಪೆ ಹಾಕೋಕಾಗುತ್ತೆ...?
ಪಾಂಡು – ನೋಡಿ ಅಣ್ಣ ತಮ್ಮಂದ್ರ.. ದಿಲ್ಲೀನಾಗೂ ನಮ್ದೇ ಸರ್ಕಾರ ಇತ್ತು.. ಇಲ್ಲೂ ನಮ್ದೇ ಸರ್ಕಾರ ಇತ್ತು.. ಆದ್ರೂ ಹೆಳಿದ್ ಕೆಲಸ ಮಾಡಿ ಕೊಡೋಕೆ ಆಗಿಲ್ಲ.. ಯಾಕಂದ್ರೆ.. ಈ ಆಪೋಸಿಷನ್ ಪಾರ್ಟಿನಲ್ ಕೂತ್ಕೋತಾರಲ್ಲ.. ಅವ್ರು ಕೊಳ್ಳೇಗಾಲಕ್ ಹೋಗ್ಬುಟ್ಟು ಮರ್ತೋಗೋ ಥರ ಮಾಟ ಮಾಡಿಸ್ಬಿಟ್ಟಿದ್ರು.. ನಾನು ಏನೇ ಒಳ್ಳೇ ಕೆಲಸ ಮಾಡ್ಬೇಕು ಅಂತ ಅನ್ಕೊಂಡ್ರೂ ಅದು ಮರ್ತೋಗ್ತಿತ್ತು.. ಅದಿಕ್ಕೆ ನಿಮ್ಮೂರಿಗೆ ಮಾಡ್ಬೇಕಾಗಿದ್ದ ಒಳ್ಳೇ ಕೆಲಸ ಯಾವುದು ಮಾಡೋಕ್ ಅಗಿಲ್ಲ.. ಇದ್ರಲ್ಲಿ ನಂದೇನೂ ತಪ್ಪಿಲ್ಲ.. ನಂಗೂ ನಿಮ್ಗೂ ಜಗಳ ತಂದಿಡ್ಬೇಕು ಅಂತ ಆಪೋಸಿಷನ್ ಪಾರ್ಟಿನೋರು ಹಿಂಗ್ ಮಾಡವ್ರೆ..
MLA (PA) – ನೀವೇನೂ ಚಿಂತೆ ಮಾಡ್ಬೇಡಿ.. ನಮ್ ಸಾಯೇಬ್ರು ಈಗ್ ತಾನೆ ಕೊಳ್ಳೇಗಾಲಕ್ ಹೋಗಿ ಕುಂಬಳ ಕಾಯಿ ಮಂತ್ರಿಸಿಕೊಂಡು ಕಾಡ್ ಪಾಪಾ ನ ಬಲಿ ಕೊಟ್ಟು ಬಂದವ್ರೆ.. ಅವರ ಮರ್ತೋಗೋ ಖಾಯಿಲೆ ಈವತ್ತಿಂದ ದೂರ ಆಗೈತೆ.. ಈಸಲ ನೀವ್ ಓಟಿ ಹಾಕಿ.. ನಿಮ್ ಕೆಲಸ ಮಾಡಿ ಕೊಡ್ತಾರೆ.. ಎಲ್ಲಾ ಒಳ್ಳೆದಾಗುತ್ತೆ ಈ ಸಲ ಓಟ್ ಹಾಕಿ..
ಸೋಮ- ಚಕ್ರ.. ಈ ಮುದ್ದೆ ಐತಲ್ಲಾ.. ಈ ಮುದ್ದೆ... ಇದು ನಮ್ ಹೊಲ್ದಾಗೆ ಬೆಳ್ದಿರೋ ರಾಗಿಯಿಂದ ಮಾಡಿದ್ದು ಕಣ್ಲಾ.. ಹೆಂಗೈತೆ..<ಎಂದೊಡನೇ ಎಲ್ಲರೂ ರಕ್ತ ವಾಂತಿ ಮಾಡಿಕೊಳ್ಳುತ್ತಾರೆ>ಅವರ ಕಿರುಚಾಟವನ್ನು ನೋಡಿ ಜನರು ಬಂದು ಅವರನ್ನು ಆಸ್ಪತ್ರೆಗೆ ಸೇರಿಸ್ತಾರೆ.. ಸೋಮನಿಗೆ ಹೆಚ್ಚಿನ ಅಪಾಯ ಆಗಿರೋದಿಲ್ಲ..
ಡಾ. ಯಡವಟ್ಟು – ಸೋಮಣ್ಣ.. ಸೋಮಣ್ಣ.. ಹೆಂಗೋ ದೇವ್ರುದೊಡ್ಡೋನು.. ನಿಮಗಾ ಏನೂ ಆಗಿಲ್ಲ.. ಜೀವ ಉಳುದೈತೆ.. ಅದಕ್ ಖುಷಿ ಪಡ್ರಿ..
ಸೋಮ– ಏನ್ ಪಾ ಡಾಕ್ಟರು.. ನಮಗ ಯಾಕ್ ಹಿಂಗಾತು..??
ಡಾ. ಯಡವಟ್ಟು – ನೀವು ಊಟ ಮಾಡಿದ್ರಲ್ಲ.. ಅದು ವಿಷ ಸೋಮಣ್ಣ..
ಡಾ. ಯಡವಟ್ಟು – ನೋಡ್ ಸೋಮಣ್ಣ.. ನೀವ್ ತಿಂದಿದ್ದ ರಾಗಿ ಒಳಗ ವಿಷ ಐತಿ.. ನೀವು ಬಿತ್ತನೆ ಮಾಡಿದ ರಾಗಿ ಬೀಜದಾಗ ವಿಷ ಇತ್ತಂದ್ರ ಅದು ಹಂಗಾ ಬೆಳಿಯೊಳಗ ಸೇರಿ ಎಲ್ಲಾ ಬೀಜದಾಗ ಬಂದು ಬಿಡ್ತೈತೆ.. ಅದ್ರಿಂದಾ ನಿಮಗ್ ಹಿಂಗಾಗೈತಿ.. ನೀವು ಮೂವರು ಬದುಕಿದ್ರಿ.. ಆದ್ರ ನಿಮ್ ಹೆಂಡ್ತಿ ರಂಗೀಲಾಗ ಭಾಳ ಸೀರಿಯಸ್ ಆಗೈತಿ.. ಆಕಿಗಿ ಆಪರೇಷನ್ ಮಾಡ್ಬೇಕು.. ನೀವು ರೆಸ್ಟ್ ಮಾಡ್ರಿ.. ನಾನು ಆಪರೇಷನ್ ಮಾಡಿ ಬರ್ತೀನಿ.
ಸೋಮ – ದೇವ್ರೇ.. ಸರ್ಕಾರ ನಮಗೆ ನೇರವಾಗಿ ಸಾಯಿಸೋಕೆ ಆಗದೇ ವಿಷದ ಬೀಜ ಕೊಟ್ಟು ನಮ್ ಬದುಕಿಗೆ ವಿಷ ಹಾಕಿತು.. ನನ್ ಹೆಂಡ್ತಿ ಸೀರಿಯಸ್ ಆಗಿದಾಳೆ.. ನನಗೇನೂ ಬ ಏಡ ಈ ಜಗತ್ತಿನಲ್ಲಿ.. ಆಕಿನಾದ್ರೂ ಉಳಿಸಿ ಕೊಡು ದೇವ್ರೆ,.. ನನಗೆ ಅದೇ ಸಾಕು..
ದೇವ್ರು – ಮಗನೇ.. ನೀನು ಆವತ್ತು ಏನಂದೆ..?? ನನಗೆ ಈ ಎಕ್ಸ್ ಟ್ರಾ ಟಾಕ್ ಟೈಮ್ ಬೇಡ ದೇವ್ರೆ... 50 ಕೆಜಿ ಸಾಕು.. ಈ ಎಕ್ಸ್ ಟ್ರಾ 50 ಕೆಜಿ ಯಾಕ್ ಕೊಟ್ಟೆ.. ಅಂದಲ್ಲ.. ಅದಕ್ಕೆ ಆ ಎಕ್ಸ್ ಟ್ರಾ ಕೆಜಿ ನಾ ನಾನು ಈವತ್ತು ವಾಪಸ್ ತಗೊಳ್ತಿದೀನಿ.. ಹೋಗು.. ನಿನ್ನ ಪಾಡಿಗೆ ನೀನು ಜೀವನ ನಡೆಸು..
ಸೋಮ – ದೇವ್ರೆ.. ಜೊತೇಲಿ ಇರೋ ತನಕ ಅವರ ಬೆಲೆ ಗೊತ್ತಾಗಕ್ಕಿಲ್ಲ ಅಂತೆ.. ನನಗೂ ಹಂಗೆ ಆಗಿದ್ದು.. ನನ್ ಹೆಂಡ್ತಿ ಹೆಂಗಾದ್ರೂ ಇರಲಿ.. ಆದ್ರೆ ಅವಳಷ್ಟು ಪ್ರೀತಿನ ನಂಗೆ ಯಾರೂ ತೋರಿಸಿಲ್ಲ ದೇವ್ರು.. ಆ ಪ್ರೀತೀನ ನನ್ನಿಂದ ದೂರ ಮಾಡ್ಬೇಡ.. ಅಂದ.. ಚೆಂದ.. ಇದೆಲ್ಲದಕ್ಕಿಂತ ಪ್ರೀತಿ ಮುಖ್ಯ.. ಅನ್ನೋದು ನಂಗ್ ಗೊತ್ತಾಗಿದೆ.. ಎಕ್ಸ್ ಟ್ರಾ ಟಾಕ್ ಟೈಮ್ ಜೊತೆಗೆ ಅವಳ ಎಕ್ಸ್ ಟ್ರಾ ಪ್ರೀತಿ ಕೂಡ ನಂಗ್ ಬೇಕು.. ಅವಳನ್ನ ಉಳಿಸಿಕೊಡು ದೇವ್ರು.. ಉಳಿಸಿಕೊಡು..
ದೇವ್ರು – ತಥಾಸ್ತು
ಡಾ. ಯಡವಟ್ಟು – ಸಕ್ಸಸ್... ಸಕ್ಸಸ್.. ನನ್ನ ಮೊದಲನೇ ಆಪರೇಷನ್ ಸಕ್ಸಸ್ ಆಗ್ಬಿಟ್ತು.. ಸೋಮಣ್ಣ.. ನಿನ್ನೆಂಡ್ರು ಬದುಕಿಬಿಟ್ಳು..
ಸೋಮ – (ರಂಗೀಲಳನ್ನು ನೋಡಿ ಡಾಕ್ಟರ್ ಗೆ ಹೇಳ್ತಾನೆ) ಇದೇನ್ ಡಾಕ್ಟ್ರೇ.. ನನ್ನೆಂಡ್ರು 50 + 50 ಡಬಲ್ ಟಾಕ್ ಟೈಮ್ ಥರ ಇದ್ದೋಳು ಈಗ್ ನೋಡಿದ್ರೆ ಇಟೋಂದ್ ಸಣ್ಣಗೆ ಆಗೋಗಿದಾಳೆ..??
ಡಾ, ಯಡವಟ್ಟು – ಏನಿಲ್ಲ ಸೋಮಣ್ಣ.. ನಿನ್ನೆಂಡ್ರು ಹೊಟ್ಟೇಲಿ ವಿಷ ಇತಲ್ವಾ..?? ಅದಿಕ್ಕೆ ಅವರಿಗೆ ಹೊಟ್ಟೆ ಕ್ಲೀನ್ ಆಗ್ಲಿ ಅಂತ ಬೆಳಿಗ್ಗೆಯಿಂದ ವಾಂತಿ ಮಾಡ್ಸಿದೆ.. ವಾಂತಿ ಮಾಡೋ ಫೋರ್ಸ ನಲ್ಲಿ ಹೊಟ್ಟೆಲಿರೋ ಕರುಳೆಲ್ಲಾ ಹೊರಗೆ ಬಂದುಬಿಟ್ಟಿತ್ತು... ಕೊನೇಗೆ ಸಿಕ್ಕಿದಷ್ಟು ಕರುಳುಗಳನ್ನು ಮತ್ತೆ ಅವರ ಹೊಟ್ಟೆ ಒಳಗೆ ಇಟ್ಟು ಆಪರೇಷನ್ ಮಾಡಿದೆ.. ಅದಕ್ಕೆ ಅವರು ಡಬಲ್ ಟಾಕ್ ಟೈಮ್ ಥರ ಇದ್ದೋರು ಈಗ ಹಿಂಗೆ ಸಿಂಗಲ್ ಟಾಕ್ ಟೈಮ್ ತರ ಆಗೋಗ್ಬಿಟ್ಟವ್ರೆ..
0 Комментарии