ಕರ್ನಾಟಕದಲ್ಲಿ
ರಾಜಕೀಯ ಮೇಲಾಟಗಳು ಜೋರಾಗ್ತಿದೆ. ಪಕ್ಷದಿಂದ ಪಕ್ಷಕ್ಕೆ ಹಲವರು ಜಿಗೀತಾ ಇದ್ದಾರೆ.
ವಲಸಿಗರ ಅಬ್ಬರ ಎಲ್ಲಾ
ಪಕ್ಷಗಳಲ್ಲೂ ಜೋರಾಗುತ್ತಿದೆ. ಇಂಥಾ ಟೈಮಲ್ಲೇ, ಬಿಜೆಪಿ
ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪನವರ ಬಗ್ಗೆ
ಒಂದು ಸ್ಫೋಟಕ ಹೇಳಿಕೆಯನ್ನ ಹೊರ
ಹಾಕಿದ್ದಾರೆ. ಆ ಹೇಳಿಕೆ ಕೊಟ್ಟಿದ್ದು
ಯಾರು ಗೊತ್ತಾ? ನಟ, ನಿರ್ದೇಶಕ
ಮತ್ತು ನಿರ್ಮಾಪಕ ಪ್ರಕಾಶ್ ರೈ.
ಹೌದು. ನಟ ಪ್ರಕಾಶ್ ರೈ
ಬಿಎಸ್ ಯಡಿಯೂರಪ್ಪನವರ ಬಗ್ಗೆ ವಿಚಿತ್ರವಾದ ಹೇಳಿಕೆಯನ್ನು
ಕೊಟ್ಟಿದ್ದಾರೆ. ಬಿಎಸ್.ಯಡ್ಯೂರಪ್ಪ ಕರ್ನಾಟಕದವರೇ
ಅಲ್ಲ. ಅವರು ಕರ್ನಾಟಕದವರ ಥರ
ಕಾಣಿಸ್ತಾ ಇಲ್ಲ ಅನ್ನೋ ಮೂಲಕ,
ಪರೋಕ್ಷವಾಗಿ ಯಡಿಯೂರಪ್ಪನವರು ವಲಸಿಗರು ಅಂತ ಹೇಳಿದ್ದಾರೆ.
ಆದರೆ ಪ್ರಕಾಶ್ ರೈ ಯಾವ
ಉದ್ದೇಶದಿಂದ ಈ ಥರದ ಹೇಳಿಕೆಯನ್ನು
ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ.
0 Комментарии