ದೇಶಕ್ಕಾಗಿ ಹೋರಾಡಿ ಮಡಿದ ವೀರ ಯೋಧರಿಗೆ ಕ್ರಾಂತಿಕಿಡಿ ತಂಡದಿಂದ ವೀರ ನಮನ
ಹೇ ವೀರ ಇದೋ ನಿನಗೆ ನಮನ.
ಹೇ ವೀರ ಇದೋ ನಿನಗೆ ನಮನ.
ನೀ..ನ್ ಇಲ್ಲದೆ ಅಳುತಿಹುದು ತಾಯಿ ಮನ
ಸಾ....ವಲ್ಲೂ ನಗುತಿಹುದು ನಿನ್ನ ನಯನ
ನಿನ್ನ ಮರು ಜನ್ಮಕ್ಕಾಗಿ ನಡೆದಿದೆ ಹೋಮ-ಹವನ
!! ಹೇ ವೀರ ಇದೋ ನಿನಗೆ ನಮನ
ನೀ..ನ್ ಇಲ್ಲದೆ ಅಳುತಿಹುದು ತಾಯಿ-ಮನ!!
ದೇಶ-ಭಾಷೆಗೆ, ತಾಯಿ-ನಾಡಿಗೆ ನೀನು ಪ್ರಾಣ ಕೊಟ್ಟೆ
ಭಾರತಾಂಬೆಯ ರಕ್ಷೆ ಮಾಡುತ ನೀನು ಜೀವ ಬಿಟ್ಟೆ
ಹಿಂದೂ-ಕ್ರೈಸ್ಥರು-ಮುಸಲ್ಮಾನರು ಎಂಬ ಭೇದ ಸುಟ್ಟೆ
ಸಾವು-ನೋವನು ನೀನೆ ನುಂಗುತ ದೂರವಗಿಬಿಟ್ಟೆ..!!
!! ಹೇ ವೀರ ಇದೋ ನಿನಗೆ ನಮನ
ನೀ...ನ್ ಇಲ್ಲದೆ ಅಳುತಿಹುದು ತಾಯಿಮನ !!ರಕ್ತ ಹರಿಯಿತು, ಭೂಮಿ ನಡುಗಿತು, ನಿನ್ನ ಸಾವು ಕಂಡು
ಭ್ರಾಂತರಾದರು ಭಾರತೀಯರು ಈ ವಿಷಯವುಂಡುಅಳುವಿನಾರ್ಭಟ ಹೆಚ್ಚಾಯಿತು ನಿನ್ನ ಕಳೆದುಕೊಂಡು
ಖುಷಿಯ ಪಟ್ಟರು ದೇಶದ್ರೋಹಿಗಳು ಮಧ್ಯ-ಮಾಂಸವುಂಡು
!! ಹೇ ವೀರ ಇದೋ ನಿನಗೆ ನಮನ
ನೀ...ನ್ ಇಲ್ಲದೆ ಅಳುತಿಹುದು ತಾಯಿಮನ !!ಇಂಥ ವೀರರು ತುಳಿದ ಮಣ್ಣಲಿ ಛಲವು ಅಡಗಿ ಹೋಯ್ತೆ..?
ಕುದಿಯುತಿರುವ ಈ ರಕ್ತವೆಲ್ಲವೂ ತಣ್ಣಗಾಗಿ ಹೋಯ್ತೆ..?
ಭ್ರಾಷ್ಟಾಚಾರಕೆ, ದೇಶ ದ್ರೋಹಕ್ಕೆ, ನೆಲವು ಒಗ್ಗಿ ಹೋಯ್ತೆ..?ರಕ್ತ ಹರಿಸಿದ ವೀರ ಯೋಧರಿಗೆ ಬೆಲೆಯೂ ಇಲ್ಲದಯ್ತೆ..?
!! ಹೇ ದೇವ ಕಾಪಾಡು ನಮ್ಮ ದೇಶ
ನೀ ತಿಳಿಸು ಆ ವೀರ ಬರುವ ನಿಮಿಷ...!!!
ಶೇಖರ್ ಪುಜಾರಿ
0 Комментарии