ದರ್ಶನ್ ಮತ್ತು ನಿಖಿತಾ ಒಂದು ಸಿನೆಮಾದಲ್ಲಿ ನಟಿಸಿದ್ರೆ ಸಾಕು ಅದರ ಗಮ್ಮತ್ತೇ ಬೇರೆ.. ಯಾಕಂದ್ರೆ ನಿಖಿತಾಗೆ ದರ್ಶನ್ ಲಿಪ್ ಟು ಲಿಪ್ ಟು ಲಿಪುಟು ಕೊಡೆ ಅಂತ ಡೈರೆಕ್ಟಾಗೇ ಕೇಳ್ತಾರೆ.. ಯೋಧಾ ಚಿತ್ರದಲ್ಲಿನ ಈ ಹಾಡು ಬಹಳಷ್ಟು ವಿವಾದ ಎಬ್ಬಿಸಿತು.. ನಿಖಿತಾ ದರ್ಶನ್ ಲಿಪ್ ಗೆ ಲಿಪ್ ಸೇರಿಸೋದು ನೋಡಿದ ದರ್ಶನ್ ಹೆಂಡತಿಗೆ ತಡಿಯೋಕೆ ಆಗಲಿಲ್ಲ. ಇದು ಹಲವಾರು ವಿವಾದಗಳಿಗೆ ಕಾರಣವಾಯ್ತು.. ದರ್ಶನ್ ರವರ ಸಾಂಸಾರಿಕ ಜೀವನವೇ ಬುಡಮೇಲು ಮಾಡಿತು. ನಿಖಿತಾ ಮತ್ತು ದರ್ಶನ್ ಮಧ್ಯೆ ಏನೇನೋ ಇದೆ ಅಂತ ಗಾಂಧಿನಗರದ ತುಂಬಾ ಗುಲ್ಲಾಗಿತ್ತು.. ಈ ವಿಷಯವಾಗಿ ಪತ್ನಿಗೆ ಕಿರುಕುಳ ನೀಡಿದ್ದ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲುಪಾಲಾಗಿದ್ದು ಕೂಡಾ ಇನ್ನೂ ಹಸಿ ಸುದ್ದಿಯಾಗೇ ಇದೆ. ಹೀಗಿರುವಾಗ ಈಗ ಮತ್ತೆ ದರ್ಶನ್ ಮತ್ತು ನಿಖಿತಾ ತುಕ್ರಾಲ್ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದಾರೆ.. ಅಬ್ಬಾ ಮತ್ಯಾವ ಸುದ್ದಿ ಇದು ಅಂತೀರಾ..? ಗಲಿಬಿಲಿ ಬೇಡ ಕಣ್ರೀ..!!. ಇದು ಸಿನಿಮಾ ಸುದ್ದಿ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ ದರ್ಶನ್-ನಿಖಿತಾ ವಿವಾದಿತ ಜೋಡಿ ಮತ್ತೆ 'ಸ್ನೇಹಿತರು' ಚಿತ್ರದಲ್ಲಿ ಜತೆಯಾಗಿದ್ದಾರೆ. ಒಮ್ಮೆ ಲಿಪ್ ಟು ಲಿಪ್ ಟು ಲಿಪುಟು ಕೊಡೆ ಅಂದಿದ್ದಕ್ಕೆ ಸ್ಯಾಂಡಲ್ ವುಡ್ಡೇ ಅದುರಿ ಹೋಗಿತ್ತು.. ಈಗ ಮತ್ತೇ ಏನಾದ್ರು ಕೊಡು ಅಂತ ದರ್ಶನ್ ಕೇಳಿದ್ರೆ ಇನ್ನು ಏನೇನು ಆಗುತ್ತೋ ಆ ದೇವರೇ ಬಲ್ಲ..!!
0 Комментарии