ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದಂತಹ ಡಾ.ಬಿ.ಎಸ್.ಯಡ್ಯೂರಪ್ಪನವರ ಗದ್ದುಗೆ ಗುದ್ದಾಟವು ತ್ರಿಶಂಕು ಪರಿಸ್ಥಿತಿಯಗಿದೆ ಎಂದು ರೆಡ್ಡಿ ಬಳಗದ ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.. ಅಷ್ಟೇ ಅ...ಲ್ಲಾ ಅಕಸ್ಮಾತ್ ಯಡಿಯೂರಪ್ಪನವರು ಬಿ.ಜೆ.ಪಿ.ಯನ್ನು ತೊರೆದು ಬಂದರೆ ನಮ್ಮ ಹೊಸ ಪಕ್ಷದಲ್ಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ ಅಂತ ಖಡಾ ಖಂಡಿತವಾಗಿ ರಾಮುಲು ಹೇಳಿದ್ದಾರೆ...ಇನ್ನೊಂದೆಡೆ, ರಾಜ್ಯ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೇಡಿಎಸ್ ರಾಜ್ಯಾಧ್ಯಾಕ್ಷ ಹೆಚ್ಡಿಕೆ. “ಗದ್ದುಗೆಗಾಗಿ ಹೀಗೆ ಒದ್ದಾಡುತ್ತಿರುವ ಯಡ್ಯೂರಪ್ಪನವರಿಗೆ ರಾಜ್ಯದ ಜನತೆಯ ಮೇಲೆ ಕಿಂಚಿತ್ತೂ ಕನಿಕರವಿಲ್ಲ.. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ಜನರ ಅಳಲನ್ನು ಆಲಿಸಿ ಅವರಿಗೆ ಒಳಿತನ್ನು ಮಾಡುವ ಬದಲು ಮುಖ್ಯಮಂತ್ರಿ ಗಾದಿಗಾಗಿ ದಿಲ್ಲಿಯಿಂದ ರಾಜ್ಯಕ್ಕೆ ಓಡಾಡುತ್ತಿದ್ದಾರೆ.. ಇದು ನಿಜಕ್ಕೂ ದುರಂತ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
0 Комментарии