1. ಬ್ರಷ್ಟಾಚಾರದ ವಿರುದ್ದ ಹೋರಾಡೋದಕ್ಕಾಗಿ ಯುವಕರಿಂದ ಹಿಡಿದು ಮುದುಕರ ವರೆಗೂ ಬರ್ತಾರಂತೆ.. ಸತ್ಯಾಗ್ರಹ ಮಾಡೋದಕ್ಕಾಗಿ ಈಗ ಕ್ಯೂನಲ್ಲಿ ನಿಂತು ಮುಗಿ ಬಿದ್ದು ಬರ್ತಿದ್ದಾರೆ ಅಂತೆ.. ಭ್ರಷ್ಟಚಾರದ ವಿರುದ್ದ ಹೋರಾಡೋಕೆ ಒಳ್ಳೆ ಮನಸು ಇದೆ ಅಂತ ನೀವು ಅಂದು ಕೊಂಡ್ರೆ ಅದು ನಿಮ್ಮ ತಪ್ಪು.. ಯಾಕಂದ್ರೆ ಬಾಲೀವುಡ್ ಕ್ಯಾಟ್ ಅಂದ್ರೆ ಕತ್ರೀನಾ ಕೈಫ್ ಈಗ “ಸತ್ಯಾಗ್ರಹ” ಅನ್ನೋ ಸಿನೆಮಾ ಮಾಡ್ತಿದ್ದಾರೆ,, ಹೀಗಾಗಿ ಈ ಸಿನೆಮಾದಲ್ಲಿ ಕ್ಯಾಟ್ ಜೊತೆ “ನಾನು ಸತ್ಯಾಗ್ರಹ ಮಾಡ್ತೀನಿ ನಾನು ಸತ್ಯಾಗ್ರಹ ಮಾಡ್ತೀನಿ “ಅಂತ ಮಕ್ಕಳಿಂದ ಹಿಡಿದು ಮುದುಕರವರೆಗೆ ಮುಗಿ ಬಿದ್ದು ಬರ್ತಿದ್ದಾರಂತೆ.. ಪಾಪ ಇವರ ಕಾಟ ನೋಡಿದ ಕತ್ರೀನಾ “ನನ್ನನ್ನು ಇವರಿಂದ ಬಿಡಿಸಿ ಅಂತ ಸತ್ಯಾಗ್ರಹ ಮಾಡಬೇಕಾಗುತ್ತೆ ಅಂತಿದ್ದಾರೆ ಗಾಂಧೀನಗರದ ಜನರು..” ಒಟ್ನಲ್ಲಿ ಕತ್ರೀನಾ ಏನಾದ್ರೂ ನಿಜವಾಗ್ಲೂ ಯಾವುದಾದ್ರೂ ಮಸೂದೆ ಜಾರಿಯಾಗಬೇಕು ಅಂತ ಏನಾದ್ರೂ ಸತ್ಯಾಗ್ರಹಕ್ಕೆ ಕುಳಿತುಕೊಂಡ್ರೆ ಆ ಸತ್ಯಾಗ್ರಹ ಯಶಸ್ವಿಯಾಗೋದು ಮಾತ್ರ ಗ್ಯಾರಂಟಿ... ಕ್ಯಾಟು... ಸತ್ಯಾಗ್ರಹದಲ್ಲಿ ನೀನು ಮಾಡಬೇಡ ಕ್ಯಾಟುವಾಕು..
0 Комментарии