Hot Posts

10/recent/ticker-posts

ಕಾಸ್ಟೂಮ್ ಕದ್ದೊಯ್ದಳು ಕಠಾರಿ ವೀರನ ಸುಂದರಿ..???

ಕಠಾರಿ ವೀರನ ಸುಂದರಿ ಕಾಸ್ಟೂಮ್ ಗಳನ್ನು ಕದ್ದೊಯ್ದಳು ಅನ್ನೋ ಸುದ್ದಿ ಈಗ ಭುಗಿಲೆದ್ದಿದೆ..  ಕಠಾರಿ ವೀರ ಸುರ ಸುಂದರಾಂಗಿ ಸಿನೆಮಾ ಈಗಾಗಲೇ ಹಲವಾರು ವಿವಾದಗಳನ್ನು ಎದುರಿಸಿ ಬಿಡುಗಡೆಯಾಗಿದೆ.. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ.. ಕೆ.ಮಂಜುರವರು ನನಗೆ ಪೇಮೆಂಟ್ ಕೊಟ್ಟಿಲ್ಲ ಅಂತ ರಮ್ಯಾ ಕೆ.ಮಂಜು ಮೇಲೆ ಹರಿ ಹಾಯ್ದಿದ್ದಾರೆ..  ಏನ್ ಮಂಜೂ ರವರೇ ಇದೆಲ್ಲಾ ನಿಜಾನಾ ಅಂತ ಕೇಳಿದ್ದಕ್ಕೆ ಮಂಜು ಇನ್ನೊಂದು ಬಾಂಬ್ ಹಾಕಿದ್ರು.. ಪೇಮೆಂಟ್ ಬೇಕು ಅಂದ್ರೆ ಒಂದು ಗಂಟೇಲೇ ಬಿಸಾಕ್ತೀನಿ.. ಆದ್ರೆ ಪೇಮೆಂಟ್ ಕೊಟ್ಟಿಲ್ಲ ಅಂತ ಹೇಳೋ ರಮ್ಯಾ “ನಮ್ಮ ಸಿನೆಮಾ ಕಾಸ್ಟ್ಯೂಮ್‌ ಗಳನ್ನು ಹೊತ್ತುಕೊಂಡು ಹೋದ್ರಲ್ವಾ ಅದರ ಬಗ್ಗೆ ಯಾಕೆ ಮಾತಾಡೋದಿಲ್ಲ..? ಅಂತ ಕೇಳಿದ್ರು.. ಅಬ್ಬಾ ಆಗಲೇ ಗೊತ್ತಾಗಿದ್ದು ರಮ್ಯಾ ಸಿನೆಮಾ ಬಟ್ಟೆಗಳನ್ನು ಎಗರಿಸಿಕೊಂಡು ಹೋಗಿದ್ದಾರೆ ಅಂತ..  ಈ ಹಿಂದೆ ನಿಂಬೆ ಹುಳಿ ಚಿತ್ರದ ನಾಯಕಿಯೊಬ್ಬಳು ಕಾಸ್ಟಯೂಮ್ ಸರಿ ಇಲ್ಲ ಅಂತ ರಂಪಾಟ ಮಾಡಿದ್ಳು... ಆದ್ರೆ ಕೊನೆಗೆ ಅದೇ ಕಾಸ್ಟೂಮ್ ಸಮೇತ ಬಾಂಬೇಗೆ ಪರಾರಿಯಾಗಿದ್ರು. ರಮ್ಯಾ ಕೂಡಾ........??????

Отправить комментарий

0 Комментарии