ಬೆಳೆದ ಬೆಲೆಗೆ ಬೇಡಿಕೆ ಸಿಗ್ತಾ ಇಲ್ಲ ಅಂತಿದ್ದ ರೈತರೆಲ್ಲಾ ಈಗ ರಮ್ಯಾ ಮನೆ ಮುಂದೆ ಕ್ಯೂನಲ್ಲಿ ನಿಂತಿದ್ರು. ಅದಿಕ್ಕೆ ರಮ್ಯಾ ಬಂದು ಯಾಕಪ್ಪಾ ಅಂತ ಕೇಳಿದ್ರೆ ಅವರು ಏನ್ ಹೇಳಿದ್ರು ಗೊತ್ತಾ..?? “ಇತ್ತೀಚೆಗಷ್ಟೇ ನೀವು “ಕಠಾರಿ ವೀರ” ಚಿತ್ರದಲ್ಲಿ ಒಂದು ಸೇಬು ನ್ನು ಕಚ್ಚಿದ್ರಿ. ಅದೀಗ 10 ಸಾವಿರ ರೂಪಾಯಿಗೆ ಮಾರಾಟ ಆಗಿದೆ.. ನಮ್ ಬೆಳೆಗಳನ್ನೂ ಸ್ವಲ್ಪ ಕಚ್ಚಿ ಕೊಟ್ರೆ ನಾವೂ ವ್ಯಾಪಾರ ಮಾಡ್ಕೋತೀವಿ ಅಂತ ಹೇಳಿದ್ರಂತೆ. .. ಇದನ್ನು ಕಂಡ ನಮ್ ರಮೇಶಪ್ಪಾ ಅದೆ ಇಲೀ ಪಾಷಾಣ ಮಾರ್ತಾನಲ್ಲ ಅವನು ತನ್ನ ವ್ಯಾಪಾರ ಲಾಸ್ ಅಗ್ತಿದೆ ಅದಿಕ್ಕೆ ಸ್ವಲ್ಪ ವಿಷದ ಬಾಟಲಿಯನ್ನು ಕಚ್ಚಿ ಕೊಡಿ.. ಯಾಪಾರ ಜೋರಾಗುತ್ತೆ ಅಂತ ಬಂದಿದ್ನಂತಪ್ಪಾ... ಇದನ್ನು ನೋಡಿದ ರಮ್ಯಾ ಸೇಬೂ ಬೇಡ ಹಣ್ಣಿನ ಸವಾಸಾನೂ ಬೇಡ ಅಂತ ಓಡೋದ್ರಂತೆ ಕಣೋ..
0 Комментарии