ಸಾಂಬಾರು ಪದಾರ್ಥಗಳಿಗಾಗಿ ಭಾರತಕ್ಕೆ ಬಂದ ಬ್ರಿಟೀಷರು ಭಾರತವನ್ನೇ ಆಳತೊಡಗಿದರು. ಭಾರತವನ್ನು ಬ್ರೀಟೀಷರಿಂದ ಬಿಡಿಸಿಕೊಳ್ಳಲು ನಡೆದ ಮಂಗಲ್ ಪಾಂಡೆ ನೇತೃತ್ವದ 1857 ರ ಸಿಪಾಂಯಿ ದಂಗೆ ವಿಫಲವಾಯಿತು. ತದ ನಂತರ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಶಾಂತಿ ಧೂತ ಮಹಾತ್ಮ ಗಾಂಧೀಜಿ, ಜವಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಹಲವು ನಾಯಕರು ಹೋರಾಟ ಮಾಡಿದರು. ಸಾವಿರಾರು ವೀರರ ತ್ಯಾಗ ಬಲಿದಾನದ ನಂತರ ಆಗಸ್ಟ್ 15, 1947 ರಂದು ಮಧ್ಯ ರಾತ್ರಿ ನಮಗೆ ಸ್ವಾತಂತ್ರ್ಯ ದಕ್ಕಿತು. ಈ ಮಹೋನ್ನತ ದಿನವನ್ನು ಭಾರತದ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ
0 Комментарии