ಮಹಾಭಾರತ ಸೂತ್ರಧಾರಿ... ಭಗವದ್ಗೀತೆಯ ಸೃಷ್ಟಿಕರ್ತ ಶ್ರೀ ಕೃಷ್ಣನು ಮಥುರಾ ನಗರದ ಕಾರಾಗೃಹದಲ್ಲಿ ಅಷ್ಟಮಿಯ ಮಧ್ಯರಾತ್ರಿ, ಜನಿಸುತ್ತಾನೆ. ದೇವಕಿ ಹೆತ್ತ ತಾಯಿಯಾದರೆ, ಯಶೋಧೆ ಸಾಕು ತಾಯಿ. ಜಗದೋದ್ಧಾರಕ ಶ್ರೀ ಕೃಷ್ಣನು ಮಹಾಭಾರತ ಯುದ್ಧದ ಪ್ರಮುಖ ಸೂತ್ರಧಾರಿಯಗಿದ್ದು ಪಾಂಡವರೊಂದಿಗೆ ಇದ್ದು, ದುಷ್ಟ ಕೌರವರನ್ನು ಸಂಹರಿಸಿ ಧರ್ಮ ಸ್ಥಾಪಿಸುತ್ತಾನೆ. ಧರ್ಮ ಸ್ಥಾಪನೆಗಾಗಿ ಯುಗ ಯುಗಗಳಲ್ಲೂ ಹುಟ್ಟಿ ಬರುತ್ತೇನೆ ಎಂದು ಸಾರಿ ಹೇಳುತ್ತಾನೆ.. ಶ್ರೀ ಕೃಷ್ಣ ಹುಟ್ಟಿದ ಈ ಪವಿತ್ರ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
0 Комментарии