Hot Posts

10/recent/ticker-posts

ಭಾರತದಲ್ಲಿ ನಡೆದ ಅತಿ ದೊಡ್ಡ ಅಗ್ನಿ ದುರಂತಗಳು















ಭಾರತದಲ್ಲಿ ಕಳೆದ 10
ವರ್ಷಗಳಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತಗಳ ಪಟ್ಟಿ ಹೀಗಿದೆ..!!













1) April 16, 1990: ಬಿಹಾರದ ಪಾಟ್ನಾದಲ್ಲಿ ಸಂಭವಿಸಿದ ರೈಲು ಅಗ್ನಿ ದುರಂತದಲ್ಲಿ ಸುಮಾರು 70 ಕ್ಕೂ ಹೆಚ್ಚು ಜನರು ಪ್ರಾಣ
ಕಳೆದುಕೊಂಡಿದ್ದಾರೆ..





2) December 23, 1995: ಹರ್ಯಾಣದ ದಬ್ವಾಲಿ ಯಲ್ಲಿ ಶಾಲೆಯ ಮಕ್ಕಳೆಲ್ಲಾ ಅಂದು ಖುಷಿಯಲ್ಲಿ
ತೇಲುತ್ತಿದ್ದರು.. ಅದು ಶಾಲಾ ವಾರ್ಷಿಕೋತ್ಸವದ ಸಂಭ್ರಮ.. ಆ ಪುಟ್ಟ ಮಕ್ಕಳು ಸ್ಟೇಜಿನ ಮೇಲೆ
ಕುಣಿದು ಕುಪ್ಪಳಿಸುತ್ತಿದ್ದರು.. ಇದ್ದಕ್ಕಿದ್ದಂತೆ ಒಳಗೆ ಶಾರ್ಟ ಸರ್ಕ್ಯೂಟ್ ಸಂಭವಿಸಿದೆ..
ಪರಿಣಾಮವಾಗಿ ಮಕ್ಕಳು ಹಾಗೂ ಹಿರಿಯರು ಸೇರಿ ಒಟ್ಟು
442 ಜನರು ಪ್ರಾಣ ತೆತ್ತಿದ್ದಾರೆ.. ಇದು ಕಳೆದ ಹತ್ತು ವರ್ಷಗಳಲ್ಲೇ ಅತಿ ದೊಡ್ಡ
ಅಗ್ನಿ ದುರಂತ ಎಂದು ಹೇಳಲಾಗುತ್ತಿದೆ




3) August 6, 2001: ತಮಿಳುನಾಡಿನ ಎರವಾಡಿ ಎಂಬಲ್ಲಿ ಇರುವ ಮಾನಸಿಕ ಆಸ್ಪತ್ರೆಯಲ್ಲಿ
ಅಗ್ನಿ ಅನಾಹುತವೊಂದು ಸಂಭವಿಸಿತ್ತು ಪರಿಣಾಮವಾಗಿ ಅಲ್ಲಿದ್ದ
28 ಜನರು ಸಜೀವವಾಗಿ ಸುಟ್ಟು ಕರಕಲಾದರು.. ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದಂತೆ
ಅವರೆಲ್ಲರ ಕಾಲುಗಳಿಗೆ ಸರಪಳಿ ಹಾಕಿ ಬಂದಿಸಲಾಗಿತ್ತು.. ಹೀಗಾಗಿ ಯಾರೂ ತಪ್ಪಿಸಿಕೊಂಡು ಹೋಗಲು
ಸಾಧ್ತವಾಗದೇ ಬೆಂಕಿಗೆ ಆಹುತಿಯಾಗಿದ್ದು ನಿಜಕ್ಕೂ ಮನ ಕರಗುವಂತಿತ್ತು..




4) January 23, 2004:  ತಮಿಳುನಾಡಿನ ಶ್ರೀರಂಗಂ ಪ್ರದೇಶದಲ್ಲಿ ಮದುವೆ ಕಾರ್ಯವೊಂದು ನಡೆಯುತ್ತಿತ್ತು.. ಎಲ್ಲರೂ
ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.. ಖುಷಿಯ ಸಂಭ್ರಮದಲ್ಲಿ ಅಗ್ನಿದೇವ ಗಹ ಗಹಿಸಿ ಆರ್ಭಟಿಸಿದ..
ಶಾರ್ಟ ಸರ್ಕ್ಯೂಟ್ ಪರಿಣಾಮವಾಗಿ ಅಗ್ನಿ ದುರಂತ ಸಂಭವಿಸಿತ್ತು.. ಇದ್ರಲ್ಲಿ ಸುಮಾರು
49 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು ಸುಮಾರು
40 ಜನರು ಗಾಯಗೊಂಡಿದ್ದರು..




5) July 16, 2004: ತಮಿಳುನಾಡಿನ ಕುಂಬಕೋಣಂ ಪ್ರದೇಶ ಅದು.,. ಅಬ್ಬಾ.. ಅದನ್ನಂತೂ ಯಾರೂ ಮರೆಯಲಾಗದು..
ಸುಮಾರು
900 ಮಕ್ಕಳು ಶ್ರೀಕೃಷ್ಣಾ ಗರ್ಲ್ಸ್ ಶಾಲೆಯಲ್ಲಿ
ಓದುತ್ತಾ ಕುಳಿತಿದ್ದರು.. ಪಕ್ಕದಲ್ಲಿ ಊಟಕ್ಕಾಗಿ ಅಡುಗೆ ತಯಾರಾಗುತ್ತಿತ್ತು... ಆದ್ರೆ ಅದೇನಾಯ್ತೋ
ಏನೋ ಗೊತ್ತಿಲ್ಲ.. ಅಡುಗೆ ಮನೆಯಿಂದ ಸ್ಪೋಟವೊಂದು ಸಂಭವಿಸಿತು.. ನೋಡ ನೋಡುತ್ತಿದ್ದಂತೆ ಕೊತ ಕೊತ
ಕುದಿಯುತ್ತಿರುವ ಅಡುಗೆಯಲ್ಲಿ ಅರ್ಧಕ್ಕರ್ಧ ಮಕ್ಕಳು ಬಿದ್ದಿದ್ದರು.. ಇತ್ತ ಒಂದು ರೂಮಿನ ಛಾವಣಿ
ಕುಸಿದು ಅದರಲ್ಲಿದ್ದ ಹಲವು ಮಕ್ಕಳು ಸಾವಿನ ಮನೆಯ ಕದ ತಟ್ಟಿದ್ದರು.. ಈ ಅಗ್ನಿ ದುರಂತದಲ್ಲಿ ಮಡಿದ
ಒಟ್ಟು ಮಕ್ಕಳ ಸಂಖ್ಯೆ
94 ಕ್ಕೂ ಹೆಚ್ಚು..




6) September 15, 2005:  ಬಿಹಾರದ ಮೂರು ಸ್ಪೋಟಕದ ಗೋಡೌನ್ ಗಳಲ್ಲಿ ಕಾಣಿಸಿಕೊಂಡಿದ್ದ ಬಯಾನಕ ಬೆಂಕಿಗೆ
35 ಜನರು ಸಾವಿಗೀಡಾಗಿದ್ದರು.. ಜೊತೆಗೆ 50 ಜನರು ಬೆಂಕಿಯ ನರ್ತನಕ್ಕೊಳಗಾಗಿ ತೀವ್ರವಾಗಿ
ಗಾಯಗೊಂಡಿದ್ದರು




7) April 10, 2006: ಮೀರತ್ ನಲ್ಲಿ ಅಂದು ಗ್ರಾಹಕರ ವ್ಯಾಪಾರ ಮೇಳ ನಡೀತಿತ್ತು..
ಜನರೆಲ್ಲರೂ ಮುಗಿಬಿದ್ದು ತಮಗಿಷ್ಟ ಬಂದದ್ದನ್ನು ಖರೀದಿಸುವ ಉತ್ಸಾಹದಲ್ಲಿ ಬಂದಿದ್ದರು..
ಇದ್ದಕ್ಕಿದ್ದಂತೆ ಮಳಿಗೆಯ ಒಂದು ಭಾಗದಲ್ಲಿ ಸದ್ದಿಲ್ಲದೇ ಶಾರ್ಟ ಸರ್ಕ್ಯೂಟ್ ಆಗಿದೆ..
ಪರಿಣಾಮವಾಗಿ ಕ್ಷಣಾರ್ಧದಲ್ಲಿ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿದೆ.. ಬೆಂಕಿಯ ರೌದ್ರ
ನರ್ತನಕ್ಕೆ
64 ಜನರು ಬಲಿಯಾಗಿ ಹೋದರು..
ಜೊತೆಗೆ
80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.



8) March 23, 2010: ಕಲ್ಕತ್ತಾದ old mansion ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 25 ಜನರು ಪ್ರಾಣ ತೆತ್ತಿದ್ದರು




9) November 20, 2011:  ರಾಷ್ಟ್ರ ರಾಜಧಾನಿ ದೆಹಲಿ ಪೂರ್ವಭಾಗದಲ್ಲಿ ಇರುವಂಥ
ಸಮುದಯಭವನದಲ್ಲಿ ಮಂಗಳಮುಖಿಯರ (ಹಿಜಡಾಗಳ) ಕಾರ್ಯಕ್ರಮ ನಡೀತಿತ್ತು.. ಸಮುದಾಯಭವನದೊಳಗೆ
ಶಾರ್ಟ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿಯಲ್ಲಿ
15 ಜನರು ಅಸುನೀಗಿದ್ರು.. ಸುಮಾರು 30 ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಆಸ್ಪತ್ರೆ
ಸೇರಿದ್ದರು..




10) December 9, 2011: ಕಲ್ಕತ್ತಾದಲ್ಲಿ ಇರುವ AMRI Hospital ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಶಾರ್ಟ ಸರ್ಕ್ಯೂಟ್ ನಿಂದಾಗಿ ಸುಮಾರು
73 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು..



11) Feb 8, 2012: ಹರಿದ್ವಾರದ electronic factory ನಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಸುಮಾರು 11  ಜನ ಕಾರ್ಮಿಕರು
ಬೆಂಕಿಗಾಹುತಿಯಾಗಿದ್ದರು.. ಇಲ್ಲು ಕೂಡ ಶಾರ್ಟ ಸರ್ಕ್ಯೂಟ್ ಇದಕ್ಕೆಲ್ಲಾ ಕಾರಣವಾಗಿತ್ತು..





12) July 30, 2012: ಇದು ತಮಿಳುನಾಡಿನಲ್ಲಿ ನಡೆದ ರೈಲು
ದುರ್ಘಟನೆ..
ಊರು ಸೇರುವ ಖುಷಿಯಲ್ಲಿ
, ಚೆನ್ನೈಗೆ ತೆರಳುತ್ತಿದ್ದ Tamil Nadu Express ರೈಲಿನಲ್ಲಿ ಕೂತಿದ್ದ ಜನರಿಗೆ ಆತಂಕವೊಂದು ಕಾದಿತ್ತು..
ಬೋಗಿಯಿಂದರಲ್ಲಿ ಕಾಣಿಸಿಕೊಂಡ ಅಗ್ನಿ ಅನಾಹುತದಲ್ಲಿ ಸುಮಾರು
32 ಜನರು ಕೊಲ್ಲಲ್ಪಟ್ಟರು.. 







13) Aug 27, 2012: ಕೇರಳದ ಉತ್ತರ ಭಾಗದಲ್ಲಿರುವ ಕಣ್ಣೂರಿನಲ್ಲಿ LPG tanker ನಲ್ಲಿ ಹೆಚ್ಚಾಗಿ ತುಂಬಿದ್ದ ಇಂಧನದ
ಪರಿಣಾಮದಿಂದ
ಟ್ಯಾಂಕರ್
ಸ್ಪೋಟಗೊಂಡಿತ್ತು.. ಪರಿಣಾಮವಾಗಿ
19 ಜನರು ಸಾವಿಗೀಡಾಗಿದ್ದರು








 








Отправить комментарий

0 Комментарии