ಮಹಾ ಶಿವರಾತ್ರಿ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಪೂಜೆಮಾಡಬೇಕು. ಬಿಲ್ವ ಪತ್ರೆ ಈಶ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದವರು ನಾನಾ ಪುಣ್ಯಗಳಿಗೆ ಪಾತ್ರರಗುವರು ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡುವ ಸಂಪ್ರದಾಯವಿದೆ. ಈ ರಾತ್ರಿಯ ಸಮಯದಲ್ಲಿ ಈಶ್ವರನು ಭೂಮಿಗಿಳಿದು ದರ್ಶನ ನೀಡುವನೆಂಬ ನಂಬಿಕೆ ಜನರದ್ದು.
0 Комментарии