ಹಿಂದು ಪುರಾಣದ ಪ್ರಕಾರ, ಪಾರ್ವತಿ ದೇವಿಯ ಮತ್ತೊಂದು ರೂಪವೇ ಮೀನಾಕ್ಷಿ ಎಂದು ನಂಬಲಾಗಿದೆ.
ಮಧುರೈನ ಆಡಳಿತಗಾರ ಮಲಯದ್ವಜ ಪಾಂಡ್ಯನ ಪ್ರಾಯಶ್ಚಿತಕ್ಕೆ ಪ್ರತಿಯಾಗಿ ಪಾರ್ವತಿ ದೇವಿಯು ಮೀನಾಕ್ಷಿ ಎಂಬ ಹೆಸರಿನಲ್ಲಿ, ಸಣ್ಣ ಮಗುವಿನ ರೂಪದಲ್ಲಿ ಭೂಮಿಗೆ ಇಳಿದು ಬಂದಿದ್ದಳು. ಆಕೆ ಬೆಳೆದು ದೊಡ್ಡವಳಾದ ನಂತರ ನಗರವನ್ನು ಆಳಲು ಪ್ರಾರಂಭಿಸಿದಳು.
ಮೀನಾಕ್ಷಿ ಅವತಾರದಲ್ಲಿದ್ದ ಪಾರ್ವತಿ ದೇವಿಯನ್ನು ವಿವಾಹವಾಗಲು ಶಿವನು ಸುಂದರೇಶ್ವರರ್ನ ರೂಪದಲ್ಲಿ ಭೂಮಿಗೆ ಇಳಿದು ಬಂದು, ಆಕೆಗೆ ವಿವಾಹವಾಗಿ ಮತ್ತೆ ಕೈಲಾಸಕ್ಕೆ ಕರೆದೊಯ್ದನು.. ಹೀಗಾಗಿ ಮೀನಾಕ್ಷಿಯಾಗಿಯೂ ಭೂಲೋಕದಲ್ಲಿ ಪ್ರಸಿದ್ಧಳಾದಳು ಪಾರ್ವತಿ ದೇವಿ. ಹೀಗಾಗಿ ತಮಿಳುನಾಡಿನ ಮಧುರೈ ನಲ್ಲಿ ಪ್ರತಿ ವರ್ಷವೂ 'ಚಿತಿರೈ ತಿರುವಿಳ'ವೆಂದು ಆಚರಿಸಲಾಗುತ್ತದೆ.
0 Комментарии