ಸೀತೆ ಶ್ರೀ ರಾಮಚಂದ್ರನ ಹೆಂಡತಿ.. ಮಿಥಿಲೆಯ ರಾಜನಾದ ಜನಕನು ಭೂಮಿಯನ್ನು ಉಳುಮೆ ಮಾಡುವಾಗ ಒಂದು ಪೆಟ್ಟಿಗೆಯಲ್ಲಿ ಸೀತೆ ಸಿಕ್ಕಿದ್ದಳು ಎಂದು ಹೇಳಲಾಗುತ್ತದೆ.
ಇನ್ನೊಂದೆಡೆ ಸೀತೆಯು ರಾವಣನ ಮಗಳು ಎಂದು ಹೇಳಲಾಗುತ್ತದೆ.. ಆದರೆ ಇವೆರಡೂ ನಿಜವಿರಬಹುದು ಎಂದು ಕೆಲವರು ಹೇಳುತ್ತಾರೆ..
ಸೀತೆ ದೊಡ್ಡವಳಾದ ನಂತರ ಶ್ರೀರಾಮಚಂದ್ರನು ಸೀತಾ ಸ್ವಯಂವರದಲ್ಲಿ ಭಾಗವಹಿಸಿ, ಶಿವಧನಸ್ಸನ್ನು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು.. ಶ್ರೀರಾಮನು ಕಾಡಿಗೆ ಹೋದಾಗ ಪತಿಯನ್ನೇ ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿ ಬಂಧಿಸಿಡುತ್ತಾನೆ. ರಾಮ ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಬರುತ್ತಾನೆ. ಸೀತಾಮಾತೆಯು ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಾಳೆ.
0 Комментарии