ಶ್ರೀ ರಾಮಚಂದ್ರ ಎನ್ನುವುದು ಶ್ರೀರಾಮನ ಪೂರ್ಣ ಹೆಸರು.
ಹಿಂದೂ ಧರ್ಮ ಗ್ರಂಥಗಳ ಪ್ರಕಾರ ವಿಷ್ಣುವಿನ ಏಳನೆಯ ಅವತಾರವೇ ರಾಮನ ಅವತಾರ ಎಂದು ನಂಬಲಾಗಿದೆ. ಅಯೋಧ್ಯೆಯ ರಾಜನಾಗಿದ್ದ ದಶರಥ ಮತ್ತು ಕೌಸಲ್ಯಾದೇವಿಯ ಮಗನಾಗಿ ಶ್ರೀರಾಮಚಂದ್ರ ಜನಿಸಿದನು.
ಸೀತೆಯನ್ನು ಮದುವೆಯಾದ ಶ್ರೀರಾಮನು, ತನ್ನ ಮಲತಾಯಿ ಕೈಕೇಯಿಯ ಕುತಂತ್ರದಿಂದಾಗಿ ಕಾಡು ಸೇರಿದನು. ಜೊತೆಗೆ ತಮ್ಮನಾದ ಲಕ್ಷ್ಮಣ ಹಾಗೂ ಪತ್ನಿ ಸೀತಾದೇವಿಯು ಕಾಡಿಗೆ ಬಂದರು. ಅಲ್ಲಿ ಶೂರ್ಪನಖಿಯೊಂದಿಗಿನ ಜಗಳದಿಂದಾಗಿ ರಾವಣನ ವಿರೋದ ಕಟ್ಟಿಕೊಂಡರು ರಾಮ ಲಕ್ಷ್ಮಣರು. ತಂಗಿಯ ಮೇಲಿನ ಅಪಾರ ಪ್ರೀತಿ ಇದ್ದಿದ್ದರಿಂದ ತಂಗಿಗಾದ ಅವಮಾನಕ್ಕೆ ಬದಲಾಗಿ ರಾವಣ ಸೀತಾದೇವಿಯನ್ನು ಲಂಕೆಗೆ ಕರೆದೊಯ್ದನು. ನಂತರ ರಾವಣನೊಡನೆ ಶ್ರೀರಾಮ ಲಕ್ಷ್ಮಣರು ಹಾಗೂ ವಾನರ ಸೇನೆ ಯುದ್ದ ಮಾಡಿ ರಾವಣನನ್ನು ಸಂಹರಿಸಿ ಸೀತಾದೇವಿಯನ್ನು ಕರೆತಂದರು. ರಾಮನಿಗೆ ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳಾದರು.
0 Комментарии