ವಿಷ್ಣುವಿನ ಪತ್ನಿಯಾದ ಲಕ್ಷ್ಮಿಯು ಹಲವಾರು ರೂಪದಲ್ಲಿ ಪೂಜೆಗೆ ಒಳಪಡುತ್ತಾಳೆ..
ಲಕ್ಷ್ಮಿಯ ಮತ್ತೊಂದು ರೂಪವೇ ವಿಜಯ ಲಕ್ಷ್ಮಿ. ಹೆಸರೇ ತಿಳಿಸುವಂತೆ ವಿಜಯದ ಸಂಕೇತವಾಗಿ ಈ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.. ಗೆಲವು ಸಾಧನೆಯಾಗಬೇಕಾದರೆ ವಿಜಯ ಲಕ್ಷ್ಮಿಯ ಕೃಪೆ ಬೇಕೇ ಬೇಕು ಅಂಬುದು ಜನರ ನಾಣ್ನುಡಿ.
ರಾಮಾಯಣದ ಸಮಯದಲ್ಲಿ ಶ್ರೀ ರಾಮನಿಗೆ ವಿಜಯ ಸಿಕ್ಕಿದ್ದು, ಹಾಗೂ ಪಾಂಡವರು ಕುರುಕ್ಷೇತ್ರವನ್ನು ಜಯಿಸಿದ್ದು ಎಲ್ಲಕ್ಕೂ ತಾಯಿ ವಿಜಯ ಲಕ್ಷ್ಮಿಯ ಕೃಪೆ ಇತ್ತು ಎಂಬುದು ಪೌರಾಣಿಕ ಸತ್ಯ.
ಯುದ್ಧದ ವಿಜಯದ ಸಂಕೇತವಾಗಿ ಕರ್ನಾಟಕದಲ್ಲಿ "ವಿಜಯ ದಶಮಿ"ಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾತೆ ಲಕ್ಷ್ಮಿಯ ಪೂಜೆಯನ್ನು ನಿಷ್ಟೆಯಿಂದ ಮತ್ತು ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ
0 Комментарии