ಐಶ್ವರ್ಯ ಲಕ್ಷ್ಮಿ.. ಜಗತ್ತಿನಾದ್ಯಂತ ಮಿಂಚಿನ ಸಂಚಲನ ನಡೆಸುವ ಸಿರಿತನವನ್ನು ಕರುಣಿಸುವ ಅಧಿದೇವತೆ..
ಲಕ್ಷ್ಮಿದೇವಿಯ ಹಲವು ಹೆಸರುಗಳಲ್ಲಿ ಬಹಳ ಪ್ರಮುಖವಾದ ರೂಪವೇ ಐಶ್ವರ್ಯಲಕ್ಷ್ಮಿ..
ವೈಕುಂಠಾಧಿಪತಿಯಾದ ವಿಷ್ಣುವಿನ ಪತ್ನಿಯು ಕರುಣಾಮಯಿಯೂ ಹೌದು.. ಕುಬೇರ ಸಂಪತ್ತನ್ನು ಭಕ್ತರಿಗೆ ಮತ್ತು ನಿಷ್ಠಾವಂತರಿಗೆ ಕರುಣಿಸಿ ಅವರನ್ನು ಸಿರಿತನದ ಬದುಕಿಗೆ ಕೊಂಡೊಯ್ಯುವ ಏಕೈಕ ದೇವತೆ ಈ ಐಶ್ವರ್ಯ ಲಕ್ಷ್ಮಿ.. ಸಿರಿತನಕ್ಕೆ ಪೂರವಾದ ಧನ, ಚಿನ್ನ, ವಜ್ರ ವೈಢೂರ್ಯ ಎಲ್ಲವೂ ವನ್ನು ನೀಡಿ ಯಾವುದೇಕೊರತೆ ಇಲ್ಲದಂತೆ ಜೀವನ ನಡೆಸುವಂತೆ ತನ್ನ ನಿಜ ಭಕ್ತರಿಗೆ ವರದಾನ ನೀಡುವ ಕರುಣಾಮಯಿಯಾಗಿದ್ದಾಳೆ. ಹೀಗಾಗಿ ವಿಶ್ವದ ಬಹುಭಾಗದಷ್ಟು ಜನರು ಐಶ್ವರ್ಯಲಕ್ಷ್ಮಿಯನ್ನೇ ಅತಿಯಾಗಿ ಪೂಜಿಸುವರು. ಧನಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ ಒಂದೇ ಅಭಿಪ್ರಾಯವೂ ಇದೆ.
0 Комментарии