ಅಯೋಧ್ಯೆಯ ಸುತ್ತ ಮುತ್ತಲೂ ರಕ್ಕಸರ ಅಟ್ಟಹಾಸ ಹೆಚ್ಚಾಗಿತ್ತು. ಅಲ್ಲಿನ ಜನರ ಭಕ್ತಿಗೆ ಮೆಚ್ಚಿ ಅವರನ್ನು ಸಂಕಷ್ಟಗಳಿಂದ ದೂರ ಮಾಡಬೇಕೆಂದು ನಿರ್ಧರಿಸಿದ ಭಗವಾನ್ ವಿಷ್ಣುವು, ತ್ರೇತಾಯುಗದಲ್ಲಿ ಶ್ರೀರಾಮನ ಅವತಾರದಲ್ಲಿ ಭೂಮಿಗೆ ಬಂದಿಳಿದನು.. ನಂತರ ರಕ್ಕಸರೆಲ್ಲರನ್ನು ಸದೆಬಡಿದು ಕೊನೆಗೆ ಲಂಕಾಧಿಪತಿ ರಾವಣನನ್ನು ಸಂಹರಿಸಿ, ರಕ್ಕಸರ ನಿರ್ನಾಮ ಮಾಡಿ ಶಾಂತಿ ನೆಲೆಸುವಂತೆ ಮಾಡುತ್ತಾನೆ. ಭೂಮಿಯಲ್ಲಿ ರಾಮನಾಮದಿಂದ ಜನಿಸಿದ ಶುಭ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ.
0 Комментарии