ಸಿದ್ರಾಮಯ್ಯನವರ ಕಾಂಗ್ರೆಸ್
ಸರ್ಕಾರ ಉತ್ತಮ ಕೆಲಸ ಮಾಡುವ
ಸಾಧ್ಯತೆಗಳು ಹೆಚ್ಚಿನ ಪ್ರಮಾಣದಲ್ಲಿವೆ.. ಇದರ
ಅರ್ಥ ನನಗೆ ಸಿದ್ರಾಮಯನವರ ಮೇಲೆ
ನಂಬಿಕೆ ಇದೆ ಅಂತಲ್ಲ.. ಸಿದ್ರಾಮಯ್ಯನವರಿಗಿಂತ
ಹೆಚ್ಚಿನ ನಂಬಿಕೆ ಇರೋದು ವಿ.ಪಕ್ಷದಲ್ಲಿ ಕುಳಿತಿರೋ ಹೆಚ್.ಡಿ.ದೇವೇಗೌಡ
ಮತ್ತು ಕುಮಾರ ಸ್ವಾಮಿಗಳ ಮೇಲೆ..

ಮುಖ್ಯಮಂತ್ರಿಯಾಗಿರೋದು ಗೌಡರಿಗೆ ನುಂಗಲಾರದ ತುತ್ತಾಗಿದೆ..
ಹೀಗಾಗಿ ಸಣ್ಣ ಪುಟ್ಟ ಹಗರಣಗಳು
ಕಂಡುಬಂದರೂ ಅದನ್ನು ತಂತ್ರ ಕುತಂತ್ರಗಳಿಂದ
ಹೊರಗೆಳೆದು ಸಿದ್ರಾಮಯ್ಯನವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಅಂತ ಬಕ ಪಕ್ಷಿಗಳಂತೆ
ಕಾಯ್ತಿದ್ದಾರೆ..

ಇಲ್ಲಿ ಇನ್ನೊಂದು ಪ್ರೆಶ್ನೆ ಏಳಬಹುದು.. ವಿ,ಪಕ್ಷದ ದೇವೇಗೌಡ್ರು
ಮತ್ತು ಸೋನಿಯಾಗಾಂಧಿ ಕೇಂದ್ರದಲ್ಲಿ ಆಪ್ತತೆಯಿಂದ ಇದ್ದಾರೆ.. ಕಾಂಗ್ರೆಸ್ ಹಗರಣ ಎಷ್ಟೇ ಇದ್ದರು
ಒಳಗೊಳಗೇ ಮುಚ್ಚಿ ಹೋಗುತ್ತೆ ಅನ್ನೋದು..

ಹಗರಣಗಳಲ್ಲಿ ಕೈ ಜೋಡಿಸಿದ್ರೆ ಮುಖ್ಯಮಂತ್ರಿಯಾಗಿ
ಅರೆ ಬರೆ ಅಧಿಕಾರವನ್ನು ಅನುಭವಿಸಿದ
ಅಧಿಕಾರದ ದಾಹ ಹೊತ್ತ ಯಡ್ಯೂರಪ್ಪನವರು
ಇದನ್ನು ಸಹಿಸೋದೇ ಇಲ್ಲ.. ಹೇಗಾದ್ರೂ
ಅವರ ಕಾಲೆಳೆದು ಸರ್ಕಾರ ಪತನ ಮಾಡೋದಕ್ಕೆ
ಹೊಂಚು ಹಾಕಿ ಕಾಯ್ತಾ ಇದಾರೆ..
ಇಷ್ಟೆಲ್ಲಾ ಬಿಗಿ ಬಂಧನದಲ್ಲಿರುವ ಸಿದ್ರಾಮಯ್ಯನವರ
ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ ಉತ್ತಮ
ಕೆಲಸಗಳನ್ನು ಮಾಡಲೇಬೇಕಾದ ಪರಿಸ್ಥಿತಿ ಇದೆ..
ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚಿನ ಭರವಸೆ ಕಾಲೆಳೆಯಲು
ಕಾದಿರುವ ವಿ.ಪಕ್ಷಗಳ ಹದ್ದಿನ
ಕಣ್ಣಿನ ಮೇಲಿದೆ. ಸಿದ್ದಣ್ಣ ಮೋಸ
ಮಾಡಿದ್ರೆ ಗೌಡ್ರು ಸಿ.,ಡಿ
ರಿಲೀಸ್ ಮಾಡ್ತಾರೆ.. ಗೌಡ್ರು ಹಗರಣ ಮಾಡಿದ್ರೆ
ಯಡ್ಡಿ, ರೆಡ್ಡಿ ಸಿ,.ಡಿ
ರೆಕಾರ್ಡ ಮಾಡ್ತಾರೆ..

ರೆಕಾರ್ಡ ಮಾಡಿದ್ರೂ ರಿಲೀಸ್ ಆದಾಗ ನೋಡೋರು
ನಾವೇನೇ..!!!
ಒಳ್ಳೆ ಸಿನೆಮಾ ಬರುತ್ತೋ.. ಕೆಟ್ಟ
ಸಿನೆಮಾ ಬರುತ್ತೋ ನೋಡೋಣ.. ಕಣ್ಣು
ಕಾಯ್ತಾ ಇದಾವೆ.. ಖುಷೀನ ತುಂಬ್ಕೊಳ್ಳೋದಕ್ಕೆ…!!
0 Комментарии