ಮೇ
12, 2014 ರಂದು ಒಂಭತ್ತನೇ ಹಂತದ ಮತದಾನ ನಡೆಯಲಿದೆ. ಒಟ್ಟು 606
ಅಭ್ಯರ್ಥಿಗಳಿದ್ದು, ಇವರಲ್ಲಿ 119 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣವನ್ನು ಎದುರಿಸ್ತಾ
ಇದ್ದಾರೆ. ಇವರಲ್ಲಿ 92 ಅಭ್ಯರ್ಥಿಗಳು ಗಂಭೀರ
ಪ್ರಕರಣದ ಆರೋಪವನ್ನು ಎದುರಿಸ್ತಾ ಇದ್ದಾರೆ. ಒಟ್ಟಾರೆ, ಸದ್ಯಕ್ಕೆ ಅಖಾಡದಲ್ಲಿರೋ ಒಟ್ಟು ಜನರ ಪೈಕಿ ಶೇ 20 ರಷ್ಟು
ಜನರು ಕ್ರಿಮಿನಲ್ ಅಭ್ಯರ್ಥಿಗಳಾಗಿದ್ದಾರೆ.
ಈ ಎಲ್ಲಾ ಅಂಶವನ್ನು ಸ್ವತಃ ಅಭ್ಯರ್ಥಿಗಳೇ ತಮ್ಮ ಅಫಿಡೆವಿಟ್ನಲ್ಲಿ ಹೇಳಿಕೊಂಡಿದ್ದಾರೆ.
ಶೇಕಡಾವಾರು ಪ್ರಮಾಣ ನೋಡೋದಾದ್ರೆ, ಬಿಜೆಪಿಯ ಹೆಚ್ಚಿನ
ಅಭ್ಯರ್ಥಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣಗಳಿರೋದು ತಿಳಿದು ಬಂದಿದೆ. ಬರೀ ಕ್ರಿಮಿನಲ್ಗಳೇ ಅಲ್ಲ, 171 ಕೋಟ್ಯಾಧಿಪತಿ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ.
ಒಟ್ಟಾರೆ ಶೇಕಡಾವಾರು ನೋಡೋದಾದ್ರೆ, ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು
ಕೋಟ್ಯಾಧಿಪತಿಗಳಾಗಿರೋದು ಕಂಡು ಬರುತ್ತೆ.
ಇನ್ನು
ವಯಕ್ತಿಕವಾಗಿ ನೋಡೋದಾದ್ರೆ, ಕಲ್ಕತ್ತಾದ ಜಾಧವ್ಪುರ ಕ್ಷೇತ್ರದಿಂದ ಸ್ಪರ್ದಿಸಿರೋ,
ಶಮಲಿ ದಾಸ್ ಮುಂಚೂಣಿಯಲ್ಲಿದ್ದು, 2000 ಕೋಟಿಯ ಒಡೆಯರಾಗಿದ್ದಾರೆ. ಪಶ್ಚಿಮ ಚಂಪಾರಣ್ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರೋ, ಚಿತ್ರನಿರ್ಮಾಪಕ
ಪ್ರಕಾಶ್ ಝಾ ತಮ್ಮ ಆಸ್ತಿ 92 ಕೋಟಿ ಅಂತ ಘೋಷಿಸಿಕೊಂಡಿದ್ದಾರೆ.
ಬಿಎಸ್ಪಿಯ ಷಾ ಅಲಾಂ ಕೂಡ 70 ಕೋಟಿಯ ಒಡೆಯರಾಗಿದ್ದಾರೆ.
ಇವರೆಲ್ಲರ ನಡುವೆ, ಡೈಮಂಡ್ ಹಾರ್ಬರ್ ಕ್ಷೆತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ,
ಸೊಗಟ್ ಘೋಷ್, ತಮ್ಮ ಆಸ್ತಿಯನ್ನು ಸೊನ್ನೆ ಎಂದು
ಘೋಷಿಸಿಕೊಂಡಿದ್ದಾರೆ..
ಒಟ್ಟಾರೆ, ಕ್ರಿಮಿನಲ್ಗಳು ಮತ್ತು ಕೋಟ್ಯಾಧಿಪತಿಗಳು ಕೊನೆಯ ಹಂತದ ಅಖಾಡದಲ್ಲಿದ್ದಾರೆ. ಭಾರತದ ಭವ್ಯ ಪ್ರಜೆಗಳು ಯಾರ ಕಡೆ ವಾಲ್ತಾರೆ ಅನ್ನೋದು ಕಾದು ನೋಡಬೇಕಿದೆ.
0 Комментарии