ಬೆಂಗಳೂರಿನ ಶಾಲೆಗಳಲ್ಲಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಾ ಇವೆ..
ಇಷ್ಟಾದ್ರೂ, ನಮ್ಮ ಸರ್ಕಾರ ಮಾತ್ರ ಕಣ್ ಮುಚ್ಕೊಂಡ್ ಕೂತಿದೆ.
ಇದೇ ಪ್ರಕರಣ ಬೇರೆ ದೇಶಗಳಲ್ಲಿ ನಡೆದಿದ್ರೆ, ಏನೇನ್ ಆಗ್ತಿತ್ತು
ಗೊತ್ತಾ.?
ಅತ್ಯಾಚಾರಿಗಳಿಗೆ ಬೇರೆ
ದೇಶಗಳಲ್ಲಿ ನೀಡೋ ಶಿಕ್ಷೆ ಅಂತಿಂಥದ್ದಲ್ಲ.. ತುಂಬಾನೇ ಕ್ರೂರವಾಗಿ ಕಾಮುಕರ
ನರ ಕಟ್ ಮಾಡಲಾಗುತ್ತೆ..
ಇದು ಅಫ್ಘಾನಿಸ್ತಾನದ ಒಂದು ದೃಶ್ಯ.. ಅತ್ಯಾರ ಮಾಡಿದ ಕಾಮುಕನ್ನ, ಊರಿನ ನಡುವೆ ತಂದು ನಿಲ್ಲಿಸ್ತಾರೆ..
ನಂತರ ಎಲ್ಲರೂ ನೋಡ್ ನೋಡ್ತಿದ್ದಂತೆ, ಮದನ ಕಾಮರಾಜನ ಮರ್ಮಾಂಗವನ್ನ
ಕಚಕ್ ಅಂತ ಕಟ್ ಮಾಡಿ ಬಿಡ್ತಾರೆ.
ಇನ್ನು ಸೌದಿ ಅರೇಬಿಯಾದ ಒಂದು ದೃಶ್ಯ ತೋರಿಸ್ತೀವಿ ನೋಡಿ.. ಈ ದೇಶಗಳಲ್ಲಿ, ಕಾಮುಕನನ್ನ ಸೀದಾ ನಡು ರಸ್ತೇನಲ್ಲಿ ನೇಣು ಹಾಕ್ತಾರೆ..!
ಅತ್ಯಾಚಾರಿಗೆ ಎಂಥಾ ಬರ್ಬರ ಶಿಕ್ಷೆಯಾಗುತ್ತೆ ಅನ್ನೋದನ್ನು ಎಲ್ಲರೂ ನೋಡ್ತಾರೆ.
ಇದನ್ನು ನೋಡಿದ್ಮೇಲೆ ಅತ್ಯಾಚಾರಿಗಳ ಎದೆಯಲ್ಲಿ ಭಯ ಶುರುವಾಗುತ್ತೆ..
ಇಲ್ ನೋಡಿ... ಅತ್ಯಾಚಾರಿಯ ರುಂಡವನ್ನ
ಹೇಗೆ ಕತ್ತರಿಸ್ತಾರೆ ನೋಡಿ..! ಇದು ಕೂಡ ಸೌದಿ ದೇಶದ ಒಂದು ರೀತಿಯ ಶಿಕ್ಷೆ.. ಅತ್ಯಅಚಾರ ಮಾಡಿದವನನ್ನು ಎಳ್ಕೊಂಡು ಬಂದು, ನಿರ್ಜನ ಪ್ರದೇಶದಲ್ಲಿ
ಆತನ ರುಂಡವನ್ನು ಕತ್ತರಿಸಿ ಬಿಡ್ತಾರೆ.
ಇರಾನ್ ಮತ್ತು
ಟರ್ಕಿಯಂಥ ದೇಶಗಳಲ್ಲಿ, ಜನರೇ ಅತ್ಯಾಚಾರಿಯನ್ನು ಕಲ್ಲಿನಿಂದ ಹೊಡೆದು
ಕೊಂದು ಹಾಕ್ತಾರೆ.
ಇನ್ನು ಸಿಂಗಾಪುರ ದೇಶದಲ್ಲಿ ನಡೆದ ಒಂದು ಘಟನೆ ತೋರಿಸ್ತೀವಿ ನೋಡಿ.. 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಕ್ಕೆ, ಇಬ್ಬರು ವ್ಯಕ್ತಿಗಳಿಗೆ
ಜನರು ಯಾವ ಥರ ಶಿಕ್ಷೆ ಕೊಟ್ಟಿದ್ದಾರೆ ಅಂತ ನೀವೇ ನೋಡಿ..
ಇನ್ನು ಆಫ್ರಿಕಾದಲ್ಲಿ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದವನಿಗೆ, ಅಲ್ಲಿನ ಜನ ಎಂಥಾ ಶಿಕ್ಷೆ ಕೊಟ್ರು ಗೊತ್ತಾ..?
ಅತ್ಯಾಚಾರಿಗಳು ಸಿಕ್ಕ ನಂತರ, ಊರಿನವರೆಲ್ಲಾ ಅವರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ನಂತರ
ಅವರ ಮೇಲೆ ಹುಲ್ಲು ಮತ್ತು ಒಣಗಿದ ಎಲೆಯನ್ನು ಹಾಕಿ, ಅತ್ಯಾಚಾರಿಗಳಿಗೆ ಬೆಂಕಿ
ಹಚ್ತಾರೆ..!
ಬೇರೆ ದೇಶಗಳಲ್ಲಿ ಅತ್ಯಾಚಾರಿಗಳನ್ನು ಹೀಗೆ ಮುಲಾಜೇ ಇಲ್ದೇ ಶಿಕ್ಷಿಸಲಾಗುತ್ತೆ.. ಆದ್ರೆ ನಮ್ಮ ದೇಶದಲ್ಲಿ ಯಾವ ಸ್ಥಿತಿ ಇದೆ ಗೊತ್ತಾ..? ಅದಕ್ಕೆ
ಒಂದು ಎಗ್ಸಾಂಪಲ್ ತೋರಿಸ್ತೀವಿ ನೋಡಿ..
ಆಂಧ್ರಾದ ಕೊಪ್ಪವರಂನಲ್ಲಿ ಅತ್ಯಾಚಾರಕ್ಕೆ ಯತ್ನ ಮಾಡಿ ಸಿಕ್ಕಾಕೊಂಡವನಿಗೆ
ಜನರು ಏನ್ ಮಾಡಿದ್ರು ಗೊತ್ತಾ..? ಆತನ ಬಟ್ಟೆ ಬಿಚ್ಚಿ, ಕಂಬಕ್ಕೆ ಕಟ್ಟಿ ಹಾಕಿದ್ರು.
ಇನ್ನೊಂದು ವಿಚಿತ್ರ ಏನಂದ್ರೆ, ಮಾನ ಕಳೆಯೋಕೆ ಬಂದವನ, ಮಾನ ಮುಚ್ಚೋ ಹಾಗೆ, ಲಂಗೋಟಿಯಿಂದ ಆತನ ದೇಹ ಮುಚ್ಚಲಾಗಿತ್ತು..!
ದೆಹಲಿಯಲ್ಲಿ ನಿರ್ಭಯ ಪ್ರಕರಣ, ಮುಂಬೈನಲ್ಲಿ ಫೋಟೋ ಜರ್ನಲಿಸ್ಟ್ ಪ್ರಕರಣದಿಂದಲೂ ಸರ್ಕಾರ ಸೀರಿಯಸ್ಸಾದ ಕ್ರಮ ಕೈಗೊಳ್ಳಲಿಲ್ಲ..
ಹೀಗಾಗಿನೇ ಇತ್ತೀಚೆಗೆ ಮಕ್ಕಳ ಮೇಲೂ ಕಾಮುಕರು ಅಟ್ಟಹಾಸಗೈತಿದ್ದಾರೆ..!
ಕರ್ನಾಟಕದಲ್ಲೇ ಸರಣಿ ಅತ್ಯಾಚಾರ ಪ್ರಕರಣಗಳು
ಕಾಮುಕರಿಗೆ ಟಾರ್ಗೆಟ್ ಆಗ್ತಿದ್ದಾರೆ ಪುಟ್ಟ ಮಕ್ಕಳು..!
ಮಕ್ಕಳನ್ನು ದೇವರು ಅಂತಾರೆ.. ಒಳ್ಳೇದು ಕೆಟ್ಟದ್ದೂ ಏನೂ ಗೊತ್ತಾಗಲ್ಲ ಕಣ್ರಿ ಅವ್ರಿಗೆ.. ‘ಏನೂ
ಗೊತ್ತಾಗಲ್ಲ.. ಈ ವಿಷ್ಯವನ್ನು ಹೊರಗೆ ಎಲ್ಲೂ ಹೇಳಲ್ಲ ಅನ್ನೋ ಧೈರ್ಯದಿಂದಲೇ,
ಕಾಮುಕರು ಮಕ್ಕಳ ಮೇಲೆ ಅತ್ಯಾಚಾರ ನಡೆಸ್ತಿದ್ದಾರೆ. ಲೈಂಗಿಕ
ದೌರ್ಜನ್ಯ ನಡೆದ ನಂತರ, ಮಕ್ಕಳಿಗೆ ಭಯ ಹುಟ್ಟಿಸಿದ್ರೆ, ಆ ಮಕ್ಕಳು ಆ ವಿಷಯವನ್ನು ಎಲ್ಲೂ ಹೇಳೋದಿಲ್ಲ.. ಇದು ಕಾಮುಕರಿಗೆ
ಪ್ಲಸ್ ಪಾಯಿಂಟ್ ಆಗೋಗಿದೆ. ಹೀಗಾಗಿ ಕನ್ನಡ ನಾಡಿನ ಎದೆ ಬಡಿತವಾಗಿರೋ ಬೆಂಗಳೂರಿನಲ್ಲೇ
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೀತಿದೆ. ಸ್ಕೂಲ್ನಲ್ಲಿ ಪಾಠ ಮಾಡ್ಬೇಕಾದೋರೇ,
ಇಂಥಾ ಕೆಲಸದಲ್ಲಿ ತೊಡಗ್ತಿದ್ದಾರೆ ಅನ್ನೋದು, ಮತ್ತೊಂದು
ನಾಚಿಕೆಗೇಡಿನ ಸಂಗತಿ..
ಒಂದಲ್ಲ.. ಎರಡಲ್ಲ...
ಪುಟ್ಟ ಮಕ್ಕಳ ಮೇಲೆ ತಿಂಗಳಿಗೊಂದು ಲೈಂಗಿಕ ದೌರ್ಜನ್ಯ ನಡೀತಿದೆ. ಇಷ್ಟಾದ್ರೂ ಕೂಡ ಸರ್ಕಾರ ಮಾತ್ರ ಸೈಲೆಂಟಾಗಿ ಕೂತ್ಕೊಂಡಿದೆ. ವಿಬ್ಗಯಾರ್
ಪ್ರಕರಣದಿಂದಲೂ ಎಚ್ಚೆತ್ತುಕೊಂಡಿಲ್ಲ.. ಆರ್ಕಿಡ್ಸ್ ಶಾಲೆ ಪ್ರಕರಣದಿಂದಲೂ ಎಚ್ಚೆತ್ತುಕೊಂಡಿಲ್ಲ.. ಇದರ ಪರಿಣಾಮವಾಗಿನೇ
ಇದೀಗ ಕೇಂಬ್ರಿಡ್ಜ್ ಶಾಲೆಯಲ್ಲಿ ಮತ್ತೆ ಇಂಥದ್ದೇ ಪ್ರಕರಣ ಮರುಕಳಿಸಿದೆ..
ಪ್ರಕರಣಗಳು ಮರುಕಳಿಸದಂತೆ, ನಮ್ಮ ಘನ ಸರ್ಕಾರ ಖಡಕ್ ನಿರ್ಧಾರ ತಗೊಂಡಿದ್ದಿದ್ರೆ, ಇಂಥಾ ಘಟನೆ
ಮರುಕಳಿಸ್ತಾ ಇರಲಿಲ್ಲ.. ಮಾತೆತ್ತಿದ್ರೆ, ನಮ್ಮ
ಸಿಎಂ ಸಾಹೇಬ್ರು ಹೇಳೋದು ಒಂದೇ ಡೈಲಾಗು.. ತನಿಖೆ ನಡೀತಿದೆ.. ಕ್ರಮ ಕೈಗೊಳ್ತೀವಿ ಅಂತ,
ಬೈಟ್: ಸಿದ್ದರಾಮಯ್ಯ,
ಸಿಎಂ
ಇನ್ನು ನಮ್ಮ ಗೃಹ ಮಂತ್ರಿಗಳು ಆಡೋ ಮಾತು ಕೇಳಿಷದ್ರೆ, ಇಂಥವರನ್ನು ನಾವು ಆಯ್ಕೆ ಮಾಡಿ ಕಳಿಸಿದ್ವೇನಪ್ಪಾ ಅಂತ ಅನಿಸಿಬಿಡುತ್ತೆ..
ಹಾಳಾಗ್ ಹೋಗ್ಲಿ ಬಿಡಿ.. ನಮಗೆ ನಿಮ್ಮ ಡೈಲಾಗ್ ಬೇಕಿಲ್ಲ.. ನೀವು ಕ್ರಮ ಕೈಗೊಳ್ಳೋದ್ ಯಾವಾಗ..?
ಅದನ್ ಹೇಳಿ.. ಇನ್ನೂ ಎಷ್ಟು ಮುಗ್ಧ ಮಕ್ಕಳು ಬಲಿಯಾಗೋವರೆಗೂ
ಕಾಯಬೇಕು ಅದನ್ನಾದ್ರೂ ಹೇಳಿ..?
ಜನರು ಇದುವರೆಗೂ ಎಲ್ಲವನ್ನೂ ತಾಳ್ಮೆಯಿಂದ ನೋಡ್ತಾ ಬಂದಿದ್ದಾರೆ. ಅಕಸ್ಮಾತ್ ಜನರು ರೊಚ್ಚಿಗೆದ್ರೆ, ಅದರಿಂದಾಗೋ ಪರಿಣಾಮ ಊಹೆ ಮಾಡ್ಕೊಳ್ಳೋದಕ್ಕೂ ಆಗಲ್ಲ.. ಯಾಕಂದ್ರೆ,
ಜನರು ಮನಸ್ಸು ಮಾಡಿದ್ರೆ, ಏನೆಲ್ಲಾ ಬದಲಾಯಿಸಬಹುದು ಅನ್ನೋದಕ್ಕೆ,
ಇತಿಹಾಸದ ಘಟನೆಗಳು, ಕ್ರಾಂತಿಗಳೇ ಸಾಕ್ಷಿ.. ಇನ್ನಾದ್ರೂ ಗೃಹ ಸಚಿವರು ಮತ್ತು ಸಿಎಂ ಸಿದ್ಧರಾಮಯ್ಯನವರು ಈ ಬಗ್ಗೆ ಸೀರಿಯಸ್ಸಾಗಿ ಕ್ರಮ
ಕೈಗೊಳ್ಳಲಿ.. ಅಗತ್ಯವಿದ್ದರೆ, ಕಾನೂನು ತಿದ್ದುಪಡಿ
ಮಾಡಿ.. ಒಟ್ನಲ್ಲಿ ಅರಳಬೇಕಿರುವ ಮುಗ್ಧ ಜೀವಗಳಿಗೆ ಸೂಕ್ತ ರಕ್ಷಣೆ ನೀಡಿ..
0 Комментарии