ಇಂದಿನ ಶಾಸಕರು ತಮ್ಮ ಮಕ್ಕಳು ಮಾತ್ರವಲ್ಲ ಅವರ ಇಡೀ ಸಂಬಂಧಿಕರೆಲ್ಲ ಕೂತು ತಿನ್ನುವ ಹಾಗೆ ಆಸ್ತಿ ಸಂಪಾದನೆ ಮಾಡಿರ್ತಾರೆ ಆದರೆ ಇಲ್ಲೊಬ್ಬ ಶಾಸಕನ ಮಕ್ಕಳು ಒಂದು ಹೊತ್ತು ಊಟಕ್ಕೂ ಪರದಾಡುವಂತ ಸ್ಥಿತಿಯಲ್ಲಿದ್ದಾರೆ ಇಷ್ಟಕ್ಕೂ ಆ ಶಾಸಕ ಯಾರು ಆತನ ಮಕ್ಕಳ ಪರಿಸ್ತಿತಿ ಏನು ಇಲ್ಲಿದೆ ನೋಡಿ ಡಿಟೇಲ್ಸ್..
ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಒಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಗೂಡೂಸಾಬ್ ಮಕ್ಕಳೇ ಈಗ ಸರ್ಕಾರ ಕೊಡುವ ಅನ್ನಭಾಗ್ಯ ಅಕ್ಕಿಗೆ ಕಾಯುವಂತಾಗಿದೆ. ಈ ಅನ್ನಭಾಗ್ಯ ಅಕ್ಕಿಯಿಂದಲೇ ಇಂದು ಅವರು ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದೆ.
ತಮ್ಮ ಕ್ಷೇತ್ರಕ್ಕಾಗಿ ಪ್ರಾಣವನ್ನೇ ಮುಡುಪಾಗಿ ಇಟ್ಟ ಗೂಡೂಸಾಬ್ ತನ್ನ ಮಕ್ಕಳಿಗಾಗಿ ಏನನ್ನೂ ಸಂಪಾದಿಸಲಿಲ್ಲ ಹಾಗೆ ಈಗಿನ ರಾಜಕಾರಣಿಗಳು ಗೂಡೂಸಾಬ್ ರನ್ನು ಅನುಸರಿಸಿದರೆ ನಮ್ಮ ರಾಜ್ಯ ರಾಮರಾಜ್ಯವಾಗುವುದರಲ್ಲಿ ಎರಡು ಮಾತಿಲ್ಲ
0 Комментарии