ಕಾಂಗ್ರೇಸ್ ಪಾದಯಾತ್ರೆಯನ್ನು ಎದುರಿಸಲು ಗಣಿ ನಾಡಿನಲ್ಲಿ ಬಿಜೆಪಿ ಸನ್ನದ್ಧವಾಗಿದೆ. ಕಾಂಗ್ರೇಸ್ ಸಮಾವೇಶಕ್ಕೆ ಸಡ್ಡು ಹೊಡೆಯಲು ರೆಡ್ಡಿ ಬ್ರದರ್ಸ್ ಸಕಲ ಸಿದ್ಧತೆಯನ್ನು ಮಾಡಿದ್ದಾರೆ. ಈಗಾಗಲೇ ಶ್ರೀರಾಮುಲು ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಕಾಂಗ್ರೇಸ್ ಬೃಹತ್ ಸಮಾವೇಶ ಮಾಡುವ ಸಂದರ್ಭದಲ್ಲಿ ಗದ್ದಲ ಉಂಟಾಗುವ ಸಾಧ್ಯತೆಗಳಿದ್ದು ಪೋಲೀಸ್ ಇಲಾಖೆ ಅವೆಲ್ಲವನ್ನು ಎಷ್ಟರ ಮಟ್ಟಿಗೆ ಎದುರಿಸಲಿದೆ ಎಂಬುದು ಕಾದು ನೋಡಬೇಕಿದೆ. ತತ್ ಕ್ಷಣದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಇದು ರೆಡ್ಡಿ ಬ್ರದರ್ಸ್ ಮತ್ತು ಕಾಂಗ್ರೇಸ್ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಇದು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು ಮತ್ತೇ ಮಾರಾಮಾರಿ ನಡೆಯುವ ಆತಂಕ ಎದ್ದು ಕಾಣುತ್ತಿದೆ.
0 Комментарии