ರೆಡ್ಡಿಗಣಿಗಾರಿಕೆಯಲ್ಲಿ ಯಡ್ಡಿಗೆ 200 ಕೋಟಿ ಲಂಚ...
ಅಬ್ಬಬ್ಬಾ..!! ಪ್ರಚಲಿತ ರಾಜಕೀಯ ವಿದ್ಯುಮಾನಗಳು ಜನಸಾಮಾನ್ಯರನ್ನು ಹುಬ್ಬೇರಿಸುವಂತೆ ಮಾಡಿದೆ.. ಮೊದಲ ಬಾರಿಗೆ ಆಡಳಿತಕ್ಕೆ ಬಂದಿರುವ ಬಿ.ಜೆ.ಪಿ ಪಕ್ಷ ಇದೇ ಮೊದಲ ಬಾರಿಗೆ ಇಷ್ಟೋಂದು ಹಗರಣಗಳಲ್ಲಿ ಭಾಗಿಯಾಗಿರುವುದನ್ನು ಕೇಳಿದ್ರೆ ಸಾರ್ವಜನಿಕರನ್ನೇ ದಿಗ್ಭ್ರಾಂತವಾಗಿಸಿದೆ..
ಕಣ್ಣೀರು ಹಾಕಿ ಕೋಟಿ ಕೋಟಿ ಕನ್ನಡಿಗರ ಮನ ಗೆದ್ದ ಯಡ್ಯೂರಪ್ಪ ಜನ ಸಾಮಾನ್ಯರ ಕಣ್ಣಿಗೇ ಮಣ್ಣೆರಚಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಅನ್ನೋ ಭಯಾನಕ ಸತ್ಯ ಇದೀಗ ಬಯಲಾಗಿದೆ. ನೆನ್ನೆಯಷ್ಟೇ ಅಕ್ರಮಗಣಿಗಾರಿಕೆಯ ಆರೋಪ ಹೊತ್ತಿರುವ ಗಾಲಿ ಜನಾರ್ಧನ ರೆಡ್ಡಿಯ ಬಾಯಿಂದ ಭಯಾನಕ ಸತ್ಯ ಹೊರಬೀಳುತ್ತಿದ್ದಂತೆ, ಇಂದು ಮತ್ತೊಂದು ಆಘಾತಕಾರಿ ಸತ್ಯವನ್ನು ಸ್ವಾಭಿಮಾನಿ ಪಕ್ಷದ ಶ್ರೀರಾಮುಲು ಹೊರಹಾಕಿದ್ದಾರೆ..

ರಾಜಕೀಯ ಪುಡಾರಿಗಳ ಕಣ್ಣೀರು ದೇಶ ಲೂಟಿ ಮಾಡಲು ಬಳಸುವಂಥ ಮೊಸಳೆ ಕಣ್ಣೀರು..!!
ಹಣ ಯಾತಕ್ಕಾಗಿ ಬಳಸಿದ್ದಾರೆ..?
ಅಕ್ರಮ ಗಣಿಗಾರಿಕೆಯ ಹಣವನ್ನು ಆಪರೇಷನ್ ಕಮಲಕ್ಕಾಗಿ ಬಳಸಿದ್ದಾರೆ ಅನ್ನೋದು ಮೇಲ್ನೋಟಕ್ಕೆ, ಖಚಿತವಾಗಿ ತಿಳಿದು ಬಂದಿರೋ ಮಾಹಿತಿಯಾಗಿದೆ.
ಸರ್ಕಾರ ರಚನೆಗೆ ಬಿ.ಜೆ.ಪಿ ಪಕ್ಷಕ್ಕೆ ಸಾಕಷ್ಟು ಜನ ಬೆಂಬಲ ನೀಡಿರಲಿಲ್ಲ.. ಹೀಗಾಗಿ ಪಕ್ಷೇತರನ್ನು ತಮ್ಮತ್ತ ಸೆಳೆಯುವಲ್ಲಿ ಕೋಟಿ ಕೋಟಿ ಹಣವನ್ನು ಚೆಲ್ಲಿದ್ದಾರೆ.
ನಂತರ ಪಕ್ಷೇತರರು ಸಹಕರಿಸದಿದ್ದಾಗ ಆಪರೇಷನ್ ಕಮಲದ ಮೂಲಕ ಜನ ಬೆಂಬಲವನ್ನು ಗಳಿಸುವಲ್ಲಿ ಈ ಹಣ ಪ್ರಮುಖ ಪಾತ್ರ ವಹಿಸಿದೆ ಅನ್ನೋದು ತಿಳಿದು ಬರ್ತಾ ಇದೆ.
ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮೊದಲಾದ ಚುನಾವಣೆಗಳಲ್ಲಿ ಹಣವನ್ನು ಬೇಕಾಬಿಟ್ಟಿ ಹಣ ಚೆಲ್ಲಿ ಗೆಲುವನ್ನು ತಮ್ಮದಾಗಿಸಿದ್ದಾರೆ..
ಇದು ಅಕ್ರಮ ಗಣಿಗಾರಿಕೆಯ ಹಿಂದಿನ ಕಹಿ ಸತ್ಯವಾಗಿದೆ.
0 Комментарии