ಹನುಮಂತ - ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿ ಬರುವ ಪ್ರಮುಖ ದೇವಾರಾಧಕ. ಹಾಗೂ ಹಿಂದು ದೇವತೆಗಳಲ್ಲಿ ಒಬ್ಬನಾಗಿದ್ದಾನೆ.
ವಾಯುದೇವ ಮತ್ತು ಅಂಜನಾದೇವಿಯ ಮಗನಾದ್ದರಿಂದ ಹನುಮಂತನನ್ನು ವಾಯುಪುತ್ರ, ಆಂಜನೇಯ, ಕಪಿವೀರನೆಂದು ಕರೆಯಲಾಗುತ್ತದೆ. ಹನುಮಂತನು ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿ ಇದ್ದನು. ಆದರೆ ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ.
ಸೀತೆಯನ್ನು ಹುಡುಕುತ್ತ ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಲಂಕೆಗೆ ಹೋಗುತ್ತಾನೆ. ತನ್ನ ಕಪಿ ಸೈನ್ಯದೊಂದಿಗೆ ರಾವಣನ ಜೊತೆ ಯುದ್ಧ ಮಾಡಿ, ರಾಮನಿಗ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ. ಅಷ್ಟೇ ಅಲ್ಲ, ರಾಮ ಲಕ್ಷ್ಮಣರಿಗಾಗಿ ಸಂಜೀವಿನಿ ಪರ್ವತವನ್ನೇ ಹೊತ್ತು ತರುತ್ತಾನೆ.
0 Комментарии