ಹಿಂದೂ ಧರ್ಮದ ನಂಬಿಕೆಯ ಪ್ರಕಾರ ವಿಷ್ಣು ದೇವನು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಜೀವಿಗಳ ಸ್ಥಿತಿಕರ್ತ ಎನಿಸಿದ್ದಾನೆ. ಭಗವದ್ಗೀತೆಯಲ್ಲಿ ವರ್ಣಿಸಿದಂತೆ ವಿಷ್ಣುವು 'ವಿಶ್ವರೂಪಿ'ಯಾಗಿದ್ದಾನೆ.
ನಾರಾಯಣ ಎಂದೂ ಕರೆಯಲ್ಪಡುವ ವಿಷ್ಣುವು ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ರಕ್ಷಿಸುವುದಕ್ಕಾಗಿ ದಶಾವತಾರವನ್ನು ಎತ್ತಿ ಬಂದಿದ್ದಾನೆ. "ಧರ್ಮ ಸಂಸ್ಥಾಪನಾಚಾರ್ಯ ಸಂಭವಾಮಿ ಯುಗೇ ಯುಗೇ" ಎಂದು ಹೇಳುವ ಮೂಲಕ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲೂ ಅವತರಿಸಿ ಬರುತ್ತೇನೆ ಎಂದು ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ.
ವಿಷ್ಣುವಿನ ದಶಾವತಾರವನ್ನುಈ ಕೆಳಗಿನ ಚಿತ್ರದ ಮೂಲಕ ಸ್ಪಷ್ಟವಾಗಿ ತಿಳಿಸಲಾಗಿದೆ
ಲಕ್ಮಿಯ ಪತಿಯಾದ ವಿಷ್ಣುವು ಮಹಿಶಿ ಎಂಬ ರಾಕ್ಷಸಿಯನ್ನು ಸಂಹರಿಸುವುದಕ್ಕಾಗಿ ಮೋಹಿನಿಯ ಅವತಾರವೆತ್ತಿ ಅಯ್ಯಪ್ಪನ ಜನನಕ್ಕೆ ಕಾರಣವಾಗುತ್ತಾನೆ. ರಾಮ, ಶ್ರೀ ಕೃಷ್ಣ ಎಲ್ಲವೂ ವಿಷ್ಣುವನ ರೂಪವೇ ಅಗಿದ್ದು, ಈಗಲೂ ಕೂಡ ವಿಷ್ಣು ಅವತರಿಸಿ ಬರುತ್ತಾನೆ ಎಂಬ ನಂಬುಗೆ ಹಿಂದುಗಳಲ್ಲಿದೆ.
0 Комментарии