Hot Posts

10/recent/ticker-posts

ಸನ್ಯಾಸಿನಿಯಾದಳಾ ಕೃಷ್ಣಸುಂದರಿ?




ಬಿಪಾಶ ಬಸು.. ಬಾಲೀವುಡ್​ನ ಸೆನ್ಷೇಷನಲ್​ ನಟಿ.. ತನ್ನ ಮಾದಕ ನಟನೆಯಿಂದ, ಅಭಿಮಾನಿಗಳ ಮತ್ತೇರಿಸಿದ ಮೋಹಕ ಬೆಡಗಿ.. ರಸಿಕತೆಗೆ ಮತ್ತಷ್ಟು ಮೆರುಗು ನೀಡೋ ಸೌಂದರ್ಯರಾಶಿ ಆಕೆಯದ್ದು.. ಆದ್ರೆ ಆ ನಟಿಗೆ ಈಗ ಜೀವನವೇ ಬೇಡ ಅನ್ನಿಸಿದೆ. ನಟನೆಯಿಂದಲೇ ಮಾದಕತೆ ಸೃಷ್ಟಿಸಿದ ಬಿಪಾಶ ಬಸು, ಈಗ ಸನ್ಯಾಸತ್ವದತ್ತ ಮುಖ ಮಾಡಿದ್ದಾರೆ. ಅಷ್ಟಕ್ಕೂ ಬಿಪಾಶ ಯಾಕ್ ಹಿಂಗ್ ಮಾಡಿದ್ರು? ನೀವೇ ನೋಡಿ..



ಬಿಪಾಶ ಬಸು.. ಕಣ್ಣೋಟದಲ್ಲೇ ಅಭಿಮಾನಿಗಳನ್ನು ಕುಣಿಸೋ ಮಾದಕ ನಟಿ.. ಹುಬ್ಬೇರಿಸಿ ನೋಡಿದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಸೆಳೆತ ಬಿಪಾಶಳಲ್ಲಿದೆ.. ಅದಕ್ಕೆ ನೋಡಿ.. ಸಿನಿಮಾದಲ್ಲಿ ಬಿಪಾಶ ಸ್ಟೆಪ್ ಹಾಕಿದ್ಳು ಅಂದ್ರೆ, ಇತ್ತ ಥಿಯೇಟರ್​ನಲ್ಲಿ ಆಕೆ ಅಭಿಮಾನಿಗಳು ಕುಣಿಯೋದು ಗ್ಯಾರಂಟಿ.. ಹೀಗಾಗಿನೇ ಬಾಲಿವುಡ್​ನಲ್ಲಿ ಆಕೆಗೆ ಸಖತ್​ ಡಿಮ್ಯಾಂಡ್​..

ನೋಡೋಕೆ ಒಂಚೂರು ಕೃಷ್ಣನ ವರ್ಣ ಈಕೆಯದ್ದು.. ಅದಿಕ್ಕೇ ಈಕೆಯನ್ನು ಕೃಷ್ಣಸುಂದರಿ ಅಂತ ಕರೀತಾರೆ.. ಬಿಪ್ಸ್ ಅನ್ನೋದು ಅಭಿಮಾನಿಗಳು ಈಕೆಗೆ ಪ್ರೀತಿಯಿಂದ ಇಟ್ಟಿರೋ ಹೆಸರು..



ತನ್ನ ಕಣ್ಣೋಟ.. ಮೈಮಾಟ.. ಗಾಸಿಪ್​ಗಳ ಚೆಲ್ಲಾಟದಿಂದ ಬಾಲಿವುಡ್​ನಲ್ಲಿ ಸದಾ ಸುದ್ದಿಯಲ್ಲಿರ್ತಾ ಇದ್ದ ನಟಿ.. ಬಾಲಿವುಡ್​ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿರೋ ಈ ಬಿಪ್ಸ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರಸಿಕರ ನಿದ್ದೆಗೆಡಿಸಿದ ನಟಿಗೆ, ಈಗ ಜೀವನವೇ ಸಾಕಾಗಿ ಹೋಗಿದ್ಯಂತೆ..!



ಯಸ್​.. ನಟಿ ಬಿಪಾಶ ಬಸು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಬದುಕಿನ ಜಂಜಾಟಕ್ಕೆ ಬೇಸತ್ತು ಹಿಮಾಲಕ್ಕೆ ಹೋಗಿ ಧ್ಯಾನಮಗ್ನರಾಗಿದ್ದಾರೆ. ಆ ಮೂಲಕ, ರಸಿಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.



ಬಿಪಾಶ ಅಂದ್ರೆ ಸಾಕು, ನಮ್ಮ ಕಣ್ಮುಂದೆ ಬರೋದು ಆಕೆಯ ಹಾಟ್ ಹಾಟ್​ ಸಿನಿಮಾಗಳು.. ಲಿಪ್​ ಲಾಕ್​ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಸದ್ದು ಮಾಡಿದ್ದ ಈಕೆ, ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾದ್ರೂ ಯಾಕೆ..? ಅನ್ನೋದು ಅವ್ರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.



ನಟನೆಯಲ್ಲೂ ಸೈ, ಕುಣಿತದಲ್ಲೂ ಸೈ ಅನಿಸಿಕೊಂಡಿರೋ ಬಿಪಾಶ ಬಸು ಹುಟ್ಟಿದ್ದು, ಜನವರಿ 7, 1979ರಲ್ಲಿ.. ಅಂದ್ರೆ ಬಿಪಾಶಾಗೆ ಈಗ ಬರೀ 36 ವರ್ಷ ಅಷ್ಟೇ.. ಚಿಕ್ಕವಳಿದ್ದಾಗಿಂದಲೂ, ಬಿಪಾಶ ಸಖತ್​ ಬೋಲ್ಡ್​​.. ಶಾಲೆಯಲ್ಲಿ ಈಕೆಯನ್ನು ಲೇಡಿ ಗೂಂಡಾ ಅಂತಲೇ ಕರೀತಿದ್ರು.. ಮೊದಲು ಮಾಡೇಲ್ ಆಗಿ, ತನ್ನ ಛಾಪು ಮೂಡಿಸಿದ್ದ ಬಿಪಾಶ, 2001 ರಲ್ಲಿ ಅಜ್ನಭಿ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಲು..



ಬಿಪಾಶಾಳ ನಟನೆ ಹೇಗಿತ್ತು ಅಂದ್ರೆ, ಮೊದಲ ಸಿನಿಮಾದಲ್ಲೇ ಫಿಲಂ ಫೇರ್​ ಅವಾರ್ಡ್ ಆಕೆಗೆ ಒಲಿದಿತ್ತು.. ಇದಾದ ನಂತರ ಮತ್ತೆ ಆಕೆ ಸದ್ದು ಮಾಡಿದ್ದು, 2002ರಲ್ಲಿ ಬಂದ ರಾಜ್​ ಸಿನಿಮಾ ಮೂಲಕ..



ಹಾರರ್​ ತ್ರಿಲ್ಲರ್​ ಸಿನಿಮಾದ ಅಭಿನಯ ಕೂಡ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ತಂದುಕೊಟ್ಟಿತ್ತು ಬಿಪಾಶಾಗೆ..  ಇದೇ ಕಾರಣಕ್ಕೆ, 2012 ರಲ್ಲಿ ರಾಜ್​ ತ್ರಿ ಸಿನಿಮಾ ಮಾಡಿತ್ತು ಚಿತ್ರತಂಡ.. ಆ ಸಿನಿಮಾದಲ್ಲೂ ತೆರೆ ಮೇಲೆ ಅಪ್ಪಳಿಸಿದ್ದು, ಇದೇ ಹಾಟ್ ನಟಿ ಬಿಪಾಶ ಬಸು..









ಬರೀ ಒಂದೆರಡು ಸಿನಿಮಾಗಳಲ್ಲ.. ಜಿಸ್ಮ್​​​, ನೋ ಎಂಟ್ರಿ ಸೇರಿದಂತೆ, ಹಲವು ಸಿನಿಮಾಗಳು ಬಿಪಾಶಾಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿವೆ. ತನ್ನ ಎದುರಾಳಿಯನ್ನು ತುಟಿಯಲ್ಲೇ ಕಟ್ಟಿಹಾಕಬಲ್ಲ ಸೌಂದರ್ಯ ಈಕೆಗೆ ವರವಾಗಿ ಸಿಕ್ಕಿತ್ತು. ಹೀಗಾಗಿನೇ ಬಾಲಿವುಡ್​ನಲ್ಲಿ ಸೆನ್ಷೇಷನ್​ ಕ್ರಿಯೇಟ್ ಮಾಡಿ, ಲಿಪ್​ ಲಾಕ್ ಸುಂದರಿಯಾಗಿ ಸದ್ದು ಮಾಡಿದ್ಖಳು. ಬಾಲಿವುಡ್​ನ ಸೆಕ್ಸ್​​ಬಾಂಬ್​ ಅಂತಲೇ ಜನಪ್ರಿಯತೆ ಗಳಿಸಿದ್ಳು..



ಬಿಪಾಶಾಳ ಸಿನಿಮಾ ನೋಡಿದ್ರೆ, ಸನ್ಯಾಸಿಯಾಗಬೇಕು ಅಂತ ಅಂದುಕೊಂಡವನಿಗೂ, ಸಂಸಾರಿಯಾಗೋ ಆಸೆ ಹುಟ್ಟುತ್ತೆ.. ಅಧುನಿಕ ವಿಶ್ವಾಮಿತ್ರನ ತಪೋಭಂಗ ಮಾಡಬಲ್ಲ ಶಾಕುಂತಲೆಯ ಸೌಂದರ್ಯರಾಶಿ ಈಕೆಯದ್ದು.. ಅಂಥದ್ರಲ್ಲಿ, ಈಕೆನೇ ಈಗ ಸನ್ಯಾಸತ್ವ ಸ್ವೀಕರಿಸಿದ್ದಾಳೆ ಅಂದ್ರೆ, ಇದಕ್ಕೆ ಏನನ್ಬೇಕೋ ಗೊತ್ತಾಗ್ತಿಲ್ಲ..



ಹೀಗೆ ಪಡ್ಡೆಗಳ ನಿದ್ದೆಗೆಡಿಸಿದ್ದ ನಟಿಯೊಬ್ಬಳಿಗೆ, ಬದುಕೆ ಬೇಡ ಅನ್ನಿಸಿದ್ದು ಯಾಕೆ..? ಅಷ್ಟಕ್ಕೂ ಬಿಪಾಶ ಬದುಕಲ್ಲಿ ಎದ್ದ ಬಿರುಗಾಳಿಯಾದ್ರೂ ಏನು..? ಆಕೆ ಸನ್ಯಾಸತ್ವ ಸ್ವೀಕರಿಸಿದ್ದರ ಹಿಂದಿರೋ ರಹಸ್ಯವೇನು..? ಅದ್ರ ಹಿಂದೆ ಒಂದು ದೊಡ್ಡ ರೋಚಕ ಕಥೆನೇ ಇದೆ..

--------------------------------------------------

ಬಿಪಾಶ ಸದ್ಯಕ್ಕೀಗ ಹಿಮಾಲಯದ ಆಶ್ರಮದಲ್ಲಿದ್ದಾರೆ. ಹಾಡು ಕುಣಿತ ಅಂತಿದ್ದ ನಟಿ ಈಗ ಜಪ ತಪಗಳಲ್ಲಿ ಮಗ್ನರಾಗಿದ್ದಾರೆ. ಅಷ್ಟಕ್ಕೂ ಬಿಪಾಶಳ ಮನಸ್ಸು ವೈರಾಗ್ಯದ ಕಡೆ ಹೋಗಿದ್ಯಾಕೆ ಗೊತ್ತಾ..? ಆಕೆಯ ಬದುಕಲ್ಲಿ ಎದ್ದು ಭಯಾನಕ ಬಿರುಗಾಳಿ.. ಆ ಬಿರುಗಾಳಿನೇ ಈಗ ಬಿಪಾಶಳನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.



ಯಸ್​​.. ಬದುಕಲ್ಲಿ ಬಿರುಗಾಳಿ ಎದ್ರೇನೇ ಮನಸ್ಸು ವೈರಾಗ್ಯದ ಕಡೆ ಎಳೆಯುತ್ತೆ.. ಅದೂ ಒಂದಲ್ಲ ಎರಡಲ್ಲ.. ಬಿಪಾಶ ಬದುಕಲ್ಲಿ ಬಂದ ಸಾಲು ಸಾಲು ಸಂಕಷ್ಟಗಳ ಹೊಡೆತ, ಆಕೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಸಂಸಾರಿಯಾಗಿ ಬದುಕು ನಡೆಸಬೇಕು ಅಂತ ಆಸೆ ಇಟ್ಟುಕೊಂಡಿದ್ದಾಕೆಯನ್ನು ಸನ್ಯಾಸತ್ವದ ಕಡೆ ಸೆಳೆದಿದೆ.




ಡಿನೋ ಮೊರೆಯಾ ಜೊತೆ ಬಿಪ್ಸ್​ ಬ್ರೇಕಪ್​
ಕಡಿದು ಬಿದ್ದಿತ್ತು 6 ವರ್ಷಗಳ ‘ಬಾಹು’ಬಂಧನ






ಯಸ್​.. ಕಣ್ಣೋಟದಲ್ಲೇ ಅಭಿಮಾನಿಗಳನ್ನು ಕುಣಿಸಿದ ಮಾದಕ ನಟಿಗೆ, ಎಲ್ಲರಂತೆ ಸಂಸಾರಿಯಾಗೋ ಆಸೆ ಇದ್ದದ್ದು ಸತ್ಯ.. ಅದಕ್ಕಾಗಿಯೇ ದಿನೋ ಮೊರೆಯಾ ಜೊತೆ ಸುತ್ತಾಟದಲ್ಲಿ ಮಗ್ನಳಾಗಿದ್ಳು.. ಒಂದಲ್ಲ ಎರಡಲ್ಲ.. 1996 ರಿಂದ 2002 ರವರೆಗೆ.. ಬರೋಬ್ಬರಿ 6 ವರ್ಷಗಳವರೆಗೆ, ಇಬ್ಬರೂ ಲವ್ವು ಡವ್ವು ಅಂತ ಸುತ್ತಾಟ ನಡೆಸಿದ್ರು.. ಆದ್ರೆ ಅದೇನಾಯ್ತೋ ಏನೋ.. ಬಿಪ್ಸ್​ ಜೊತೆಗಿನ 6 ವರ್ಷಗಳ ಸಂಬಂಧವನ್ನು ಡಿನೋ ಮೊರೆಯ ಕಡಿದುಕೊಂಡು ಬಿಟ್ರು.. ಇದು ಬಾಲಿವುಡ್​ನ ಕೃಷ್ಣ ಸುಂದರಿಯ ಮನಸ್ಸನ್ನು ಆಘಾತಗಳಿಸಿತ್ತು.







ಬಿಪಾಶಾಗೆ ಕೈ ಕೊಟ್ಟ ಮತ್ತೊಬ್ಬ ನಟ ಜಾನ್​ ಅಬ್ರಹಾಂ
ಕೆಲವೇ ದಿನಗಳಲ್ಲಿ ಎರಡನೆಯ ಪ್ರೇಮವೂ ಆಯ್ತು ಭಗ್ನ..!


2003 ರಲ್ಲಿ ಜಿಸ್ಮ್​​ ಸಿನಿಮಾದ ಶೂಟಿಂಗ್​ ವೇಳೆ, ನಟ ಜಾನ್ ಅಬ್ರಹಾಂ ಬಿಪಾಶಾಗೆ ಜೊತೆಯಾಗ್ತಾನೆ.. ಮೊದಲೇ ಭಗ್ನಪ್ರೇಮಿಯಾಗಿದ್ದ ಬಿಪಾಶಾಳ ಹೃದಯಕ್ಕೆ, ಮುಲಾಮು ಹಚ್ಚೋ ಕೆಲಸ ಮಾಡ್ತಾನೆ. ಆದ್ರೆ ಬಿಪಾಶಾಳ ಜಾನ್​ ಆಗಿದ್ದ ಜಾನ್ ಅಬ್ರಹಾಂ ಕೂಡ, ಆಕೆಗೆ ಕೈ ಕೊಡ್ತಾನೆ.. 9 ವರ್ಷಗಳ ಸುತ್ತಾಟದ ನಂತರ, 2011 ರಲ್ಲಿ ಜಾನ್ ಅಬ್ರಹಾಂ ಮತ್ತು ಬಿಪಾಶಾಳ ನಡುವಿನ ಸಂಬಂಧಕ್ಕೆ, ಅಧಿಕೃತವಾಗಿ ಎಳ್ಳು ನೀರು ಬಿಡಲಾಗುತ್ತೆ. ಆ ಮೂಲಕ, ಎರಡನೇ ಬಾರಿ ಭಗ್ನಪ್ರೇಮಿಯಾಗ್ತಾಳೆ ಬಾಲಿವುಡ್​ನ ಸೆಕ್ಸ್​​ ಬಾಂಬ್​ ಬಿಪಾಶಾ..!





ಬಿಪಾಳ ಬಾಳಿಗೆ ಮೂರನೇ ಪ್ರೇಮಿಯ ಎಂಟ್ರಿ..!
9 ತಿಂಗಳಲ್ಲೇ ಮುರಿದು ಬಿತ್ತು ಬಣ್ಣದ ಪ್ರೇಮ..!
 

ಜಾನ್ ಅಬ್ರಹಾಂ ಜೊತೆಗೆ ಬ್ರೇಕಪ್ ಆದ ನಂತರ, 2014 ರ ಫೆಬ್ರವರಿ 19 ರಂದು ನಟ ಹರ್ಮನ್​ ಬವೇಜಾ ಜೊತೆ ರಿಲೇಶನ್​ಷಿಪ್​ ಶುರು ಮಾಡಿಕೊಳ್ತಾಳೆ.. ಆ ಮೂಲಕ ಮೂರನೇ ಪ್ರೇಮಕ್ಕೆ ಮುನ್ನುಡಿ ಹಾಕ್ತಾಳೆ ಬಿಪಾಶ.. ಆದ್ರೆ ಮ್ಯಾನ್ ಪ್ರಪೋಸಸ್ ಬಟ್ ಗಾಡ್ ಡಿಸ್ಪೋಸಸ್ ಅನವ್ನೋ ಹಾಗೆ, ಹರ್ಮನ್ ಬವೇಜಾ ಮತ್ತು ಬಿಪಾಶಳ ಸಂಬಂಧ ಮುರಿದು ಬಿದ್ದಿತ್ತು.. ಅದೂ ಕೇವಲ ಒಂಭತ್ತು ತಿಂಗಳಲ್ಲೇ..





















ರಾಜಕಾರಣಿಯ ಜೊತೆಗೆ ಬಿಪ್ಸ್​​ ಕಾಂಟ್ರವರ್ಸಿ
ಬಿಪಾಶ ನಿದ್ದೆಗೆಡಿಸಿದ್ದ ‘ಸೆಕ್ಸ್​​’ ಟೇಪ್​​ ಪುರಾಣ


 ಈ ಪ್ರೇಮ ಪುರಾಣಗಳಿಂದ ಬಾಲಿವುಡ್​ನ ಕೃಷ್ಣ ಸುಂದರಿ ಮಾನಸಿಕವಾಗಿ ಕುಗ್ಗಿ ಹೋಗಿದ್ಳು.. ಬಂದವರೆಲ್ಲಾ ಬಾಳಿಗೆ ಬೆಳಕಾಗುತ್ತೆ ಅಂತ ಅಂದುಕೊಂಡಿದ್ದಾಗಲೇ, ಅವರೆಲ್ಲಾ​​ ಬಿರುಗಾಳಿ ಎಬ್ಬಿಸಿ ಹೊರಟು ಬಿಟ್ಟಿದ್ರು.. ಇದು ಸಹಜವಾಗಿಯೇ ಬಿಪಾಶಾಳ ಬದುಕಲ್ಲಿ ಭಾರಿ ದೊಡ್ಡ ಹೊಡೆತಗಳನ್ನು ನೀಡಿದ್ದು ಮಾತ್ರ ಸುಳ್ಳಲ್ಲ.. ಇದ್ರ ಮಧ್ಯೆ ರಾಜಕಾರಣಿಯೊಂದಿಗಿನ ಸೆಕ್ಸ್​​ ಟೇಪ್​ ಕೂಡ ಬಿಪಾಶಾಗೆ ಭಾರೀ ಹೊಡೆತ ನೀಡಿತ್ತು..



2006 ರಲ್ಲಿ ರಾಜಕಾರಣಿ ಅಮರ್​ ಸಿಂಗ್​​ ಜೊತೆಗೆ  ಬಿಪಾಶಳ ಒಡನಾಟ ಶುರುವಾಗುತ್ತೆ. ಆ ವೇಳೆ ಇಬ್ಬರ ನಡುವೆ ಡರ್ಟಿ ಟಾಕ್​ಗಳೂ ಕೂಡ ನಡೆದಿರುತ್ತೆ. ಆದ್ರೆ ಇಬ್ಬರ ನಡುವಿನ ವಯಕ್ತಿಕ ಮಾತುಗಳು ಅದ್ಹೇಗೋ ರೆಕಾರ್ಡ್​ ಆಗಿ ಬಿಟ್ಟಿದೆ. ಇಬ್ಬರ ನಡುವಿನ ಆ ಡರ್ಟಿ ಮಾತುಗಳು ಲೀಕ್​ ಆಗಿ ತೀವ್ರ ಸಂಚಲನ ಮೂಡಿಸಿತ್ತು.. ಇದನ್ನು ಕೇಳಿಸಿಕೊಂಡ ಜನಗಳು, ಅಮರ್​ ಸಿಂಗ್ ಮತ್ತು ಬಿಪಾಶ ಇಬ್ಬರ ನಡುವೆ ಏನೇನೋ ಇದೆ ಅಂತ ಮಾತಾಡಿಕೊಳ್ಳೋಕೆ ಶುರು ಮಾಡಿದ್ರು.. ಆದ್ರೆ ಆ ಡರ್ಟಿ ಮಾತುಗಳು ಲೀಕ್ ಆಗಿದ್ದು, ಬಿಪಾಶಾಳ ಇಮೇಜ್​​ ಅನ್ನ ಡ್ಯಾಮೇಜ್ ಮಾಡಿತ್ತು.. ಬಾಲಿವುಡ್​ನಲ್ಲಿ ಬಿಪಾಶಾ ಬಗ್ಗೆ ಏನೇನೋ ಮಾತುಗಳು ಹರಿದಾಡೋಕೆ ಶುರುವಾದ್ವು.. ಈ ಹಿಂದಿನ ಪ್ರೇಮ ವೈಫಲ್ಯಗಳು ಮತ್ತು ಅಮರ್​ಸಿಂಗ್​ ಜೊತೆಗಿನ ಡರ್ಟಿ ಮಾತುಗಳ ಟೇಪ್​ ಲೀಕ್ ಪ್ರಕರಣ,  ಈ ಬಿಪಾಶಾಳನ್ನು ಬದುಕೇ ಬೇಡ ಅನ್ನೋ ಮಟ್ಟಕ್ಕೆ ತಂದು ನಿಲ್ಲಿಸಿತ್ತು..



ಒಂದಲ್ಲ ಎರಡಲ್ಲ.. ಸಾಲು ಸಾಲು ಪ್ರೇಮ ಪ್ರಕರಣಗಳ ವೈಫಲ್ಯ ಬಿಪಾಶಾಳ ಬದುಕಲ್ಲಿ ಬಿರುಗಾಳಿ ಎಬ್ಬಿಸಿತ್ತು.. ಜೊತೆಗೆ ಅಮರ್​ಸಿಂಗ್​ ಜೊತೆಗಿನ ಮಾತುಕತೆಗಳ ಡರ್ಟಿ ಟೇಪ್​ ಬಿಪಾಶಾಳನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದ್ರೆ ಇಷ್ಟಕ್ಕೆ ವೈರಾಗ್ಯದತ್ತ ಮರಳಿದ್ಳಾ ಬಿಪಾಶಾ..? ಛಾನ್ಸೇ ಇಲ್ಲ.. ಬಿಪಾಶಾ ಹಿಮಾಲಯದ ಆಶ್ರಮ ಸೇರೋದಕ್ಕೆ ಮತ್ತೊಂದು ಕಾರಣ ಇದೆ..

--------------------------------------

ಬಿಪಾಶಾಗೆ ಜಾನ್ ಆಗ್ತಾನೆ ಅನ್ಕೊಂಡಿದ್ದ ಜಾನ್ ಅಬ್ರಹಾಂ ಕೈ ಕೊಟ್ಟಿದ್ದ.. ಹರ್ಮನ್ ಬವೇಜಾ ಕೂಡ ಆಕೆ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದ. ಸಾಲು ಸಾಲು ಪ್ರೇಮ ವೈಫಲ್ಯ ಕಂಡ್ರೂ ಬಿಪಾಶ ಅಷ್ಟೋಂದು ತಲೆ ಕೆಡಿಸಿಕೊಂಡಿರಲಿಲ್ಲ.. ಯಾಕಂದ್ರೆ ಅಲೋನ್ ಆಗಿದ್ದ ಆಕೆ ಬದುಕಿಗೆ ಮತ್ತೊಬ್ಬ ಚೆಲುವ ಎಂಟ್ರಿ ಕೊಟ್ಟಿದ್ದ. ಅವರಿಬ್ಬರ ಸಂಬಂಧ ಚೆನ್ನಾಗೇ ಇತ್ತು.. ಆದ್ರೆ ಪ್ರೇಮಿಗಳ ದಿನ ಪ್ರಿಯತಮನ ಜೊತೆ ಇರಬೇಕಿದ್ದ ಬಿಪಾಶ, ಹಿಮಾಲಯದತ್ತ ಪ್ರಯಾಣ ಬೆಳೆಸಿದ್ಳು..



ಬಿಪಾಶ ಅಂದ್ರೆ, ಆಕೆ ಅಭಿಮಾನಿಗಳ ಹೃದಯ ಈಗ್ಲೂ ಬಿಸಿಯಾಗುತ್ತೆ.. ಯಾಕಂದ್ರೆ ಅಷ್ಟೋಂದು ಹಾಟ್​ ನಟಿ ಈಕೆ. ತನ್ನ ಸಾಂಸಾರಿಕ ಬದುಕು ಹಾಗಿರಬೇಕು, ಹೀಗಿರಬೇಕು ಅಂತ ಬಿಪಾಶ ಅಂದುಕೊಂಡಿದ್ಳು.. ಸಿನಿ ದುನಿಯಾದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ಳು.. ಹೆಸರು ಜನಪ್ರಿಯತೆ ಈಕೆಯನ್ನು ಹುಡುಕಿಕೊಂಡು ಬಂದಿತ್ತು. ಇಂಥಾ ಬೆಡಗಿಗೆ ಮದುವೆಯಾಗೋ ಆಸೆ ಹೆಚ್ಚಾಗೇ ಇತ್ತು. ಈ ಬಗ್ಗೆ ಸ್ವತಃ ಬಿಪಾಶಾನೇ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಳು..



ಯಸ್.. ಸಾಲು ಸಾಲು ಪ್ರೇಮ ಪ್ರಕರಣಗಳು ಫ್ಲಾಪ್ ಆದಾಗ್ಲೂ, ಬಿಪಾಶ ಮದುವೆ ಆಲೋಚನೆಯನ್ನು ಬಿಟ್ಟಿರಲಿಲ್ಲ.. ನಾನು ಮದುವೆ ಆಗೇ ಆಗ್ತೀನಿ.. ಅದಕ್ಕೆ ಎಲ್ಲಾ ತಯಾರಿನೂ ಮಾಡ್ಕೊಂಡಿದ್ದೀನಿ ಅಂತ ಬಿಪಾಶ ಹೇಳಿದ್ಳು.. ಬಿಪಾಶ ಯಅರನ್ನ ಮದುವೆಯಾಗಬಹುದು ಅನ್ನೋದಕ್ಕೆ ಉತ್ತರ ಕೂಡ ಸಿಕ್ಕಿತ್ತು. ಯಾಕಂದ್ರೆ ಅಲೋನ್​ ಆಗಿದ್ದ ಬಿಪಾಶಾಗೆ, ಅಲೋನ್ ಸಿನಿಮಾದ ನಟ ಕರಣ್​ ಸಿಂಗ್​ ಜೋಡಿಗಾಗಿದ್ದ.

















ಯಸ್​.. ಅಲೋನ್​ ಸಿನಿಮಾದ ಶೂಟಿಂಗ್​ನಲ್ಲಿ ಇವರಿಬ್ಬರ ನಡುವಿನ ಪಿಸುಮಾತುಗಳು, ಇವರಿಬ್ಬರ ನಡುವೆ ಏನೇನೋ ನಡೀತಿದೆ ಅನ್ನೋದನ್ನು ಸಾರಿ ಹೇಳ್ತಿದ್ವು.. ಮೋಸ್ಟ್​​​ಲೀ ಮದುವೆ ಕನಸುಗಳನ್ನು ಕಣ್ಣಲ್ಲಿ ಕಟ್ಟಿಕೊಂಡಿದ್ದ ಬಿಪಾಶಾ, ಈ ಕರಣ್​​ ಸಿಂಗ್​ ಜೊತೆ ಮದುವೆ ಆಗಬಹುದು ಅಂತ ಅಂದುಕೊಂಡಿದ್ರು. ಇವರಿಬ್ಬರ ಓಡಾಟ, ಸುತ್ತಾಟ, ಎಲ್ಲವೂ ಇವರಿಬ್ಬರ ನಡುವಿನ ಪ್ರೇಮ ಪುರಾಣಕ್ಕೆ ಸಾಕ್ಷಿಯಾಗಿದ್ದವು. ಇದೇ ಫೆಬ್ರವರಿ 14ರ ಪ್ರೇಮಿಗಳ ದಿನದವರೆಗೂ ಎಲ್ಲವೂ ಚೆನ್ನಾಗೇ ಇತ್ತು.. ಆದ್ರೆ ಪ್ರೇಮಿಗಳ ದಿನ ಅದೇನಾಯ್ತೋ ಏನೋ..? ಮರುದಿನವೇ ಹಿಮಾಲಯ ಹತ್ತಿ ಬಿಟ್ಟಳು ಈ ಬಿಪಾಶಾ..!



ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಎಲ್ಲಾ ಪ್ರೇಮಿಗಳು ಫುಲ್ ಬ್ಯುಸಿಯಾಗಿರ್ತಾರೆ. ತನ್ನ ಪ್ರೇಮಿಯ ಜೊತೆ ಕಾಲ ಕಳೀಬೇಕು ಅಂತ ಕಾತರದಿಂದ ಕಾಯ್ತಾ ಇರ್ತಾರೆ.. ಇಂಥದ್ರಲ್ಲಿ, ಅದೇ ಪ್ರೇಮಿಗಳ ದಿನದಂದೇ ಈ ಬಿಪಾಶ ಹಿಮಾಲಯ ಏರುವ ನಿರ್ಧಾರ ತೆಗೆದುಕೊಂಡಿದ್ಳು..





ಬಿಪಾಶಾಳಿಂದ ದೂರಾದ್ನಾ ಕರಣ್​ಸಿಂಗ್​..?

ವಿರಹ ತಾಳದೇ ಬಿಪ್ಸ್​ಗೆ ವೈರಾಗ್ಯ ಹುಟ್ಟಿತೇ..?





ಯಸ್.. ಇಂಥದ್ದೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ಸಾಲು ಸಾಲು ಫ್ಲಾಪ್​ ಲವ್​ ಸ್ಟೋರಿಗಳಿಂದ ಕಂಗೆಟ್ಟಿದ್ದ ಬಿಪಾಶಾಗೆ, ಕರಣ್​ ಸಿಂಗ್​ ಆದ್ರೂ ಆಸರೆಯಾಗ್ತಾನೆ ಅಂತ ಅಂನ್ಕೊಂಡಿದ್ರು.. ಆದ್ರೆ ಕರಣ್​ ಕೂಡ ಕರುಣೆ ಇಲ್ಲದೇ ಬಿಪ್ಸ್​ ಜೊತೆ ಬ್ರೇಕಪ್​ ಮಾಡ್ಕೊಂಡಿದ್ದಾನಂತೆ. ಇದು ಬಿಪಾಶಾಗೆ ಬದುಕಿನ ಬಗ್ಗೆ ವೈರಾಗ್ಯ ಹುಟ್ಟುವಂತೆ ಮಾಡಿದೆ. ಅದ್ರಲ್ಲೂ ಪ್ರೇಮಿಗಳ ದಿನದಂದು ಪ್ರೇಮಿ ಜೊತೆ ಇರಬೇಕಿದ್ದ ಬಿಪಾಶ ಹಿಮಾಲವೇರಿ, ಆಶ್ರಮ ಸೇರುವ ನಿರ್ಧಾರ ಮಾಡಿದ್ಳು..



ಇಷ್ಟುದಿನಗಳ ನೋವನ್ನು ಯೋಗದ ಮೂಲಕ ಮರೀತಾ ಇದ್ಳು ಬಿಪಾಶ.. ಆದ್ರೆ ಸಾಲು ಸಾಲು ನೋವುಗಳನ್ನು ಈ ಬೆಡಗಿಗೆ ಅರಗಿಸಿಕೊಳ್ಳೋಕೆ ಆಗಲೇ ಇಲ್ಲ.. ಹೀಗಾಗಿ ಹಿಮಾಲಯದ ಆನಂದಾಶ್ರಮಕ್ಕೆ ಬಂದಿದ್ದಾಳೆ..



ಶಾಂತಿ, ನೆಮ್ಮದಿಗಾಗಿ ಹಾತೊರೆಯುತ್ತಿದ್ದ ಬಿಪಾಶ, ಆಶ್ರಮದಲ್ಲಿ ಯೋಗದ ಮೊರೆ ಹೋಗಿದ್ದಾಳೆ.. ಹಾಡು ಕುಣಿತದ ಬದಲಿಗೆ, ಜಪತಪಗಳನ್ನು ಮಾಡ್ತಿದ್ದಾರೆ.. ಟೂ ಪೀಸ್​ ಬದಲಿಗೆ, ಬಿಳಿಯ ಬಟ್ಟೆಯನ್ನು ತೊಟ್ಕೊಂಡು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕೊಂಡು ಓಂ ಶಾಂತಿ ಅಂತ ಜಪ ಮಾಡ್ತಿದ್ದಾರೆ.



ಅಂದ್ಹಾಗೆ ಹಿಮಾಲಯದಲ್ಲಿರೋ ಈ ಆನಂದಾಶ್ರಮದಲ್ಲಿ 11 ದಿನಗಳ ವಿಶೇಷ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಅಂತ ಬಿಪಾಶ ಇಲ್ಲಿಗೆ ಬಂದಿದ್ದಾಳೆ. 11 ದಿನಗಳ ಕಾರ್ಯಕ್ರಮದ ನಂತರ ಈಕೆ ಇಲ್ಲೇ ಇರ್ತಾಳಾ,..? ಅಥವ ಮತ್ತೆ ಬಾಲಿವುಡ್​ಗೆ ಎಂಟ್ರಿ ಕೊಡ್ತಾಳಾ ಅನ್ನೋದು ನಿಗೂಢವಾಗಿ ಉಳಿದಿದೆ. ಯಾಕಂದ್ರೆ, ಪ್ರಕೃತಿಯ ಮಡಿಲಲ್ಲಿ ನನಗೆ ಶಾಂತಿ ನೆಮ್ಮದಿ ಎಲ್ಲಾ ಸಿಗ್ತಾ ಇದೆ ಅಂತ ಬಿಪಾಶ ಟ್ವೀಟ್ ಮಾಡಿದ್ದಾಳೆ. ಈ ಟ್ವೀಟ್ ನೋಡಿದ್ರೆ, ಬಿಪಾಶ ಹಿಮಾಲಯದಲ್ಲೇ ಇದ್ದು ಬಿಡ್ತಾಳೇನೋ ಅನ್ನೋ ಆತಂಕ, ಆಕೆ ಅಭಿಮಾನಿಗಳಲ್ಲಿ ಮನೆ ಮಾಡಿದೆ.



ಸದ್ಯಕ್ಕೆ 11 ದಿನಗಳ ಕಾರ್ಯಕ್ರಮಕ್ಕೆ ಅಂತ ಬಿಪಾಶ ಹಿಮಾಲಯದ ಆಶ್ರಮಕ್ಕೆ ಹೋಗಿದ್ದಾಳೆ. ಆದ್ರೆ ಕಾರ್ಯಕ್ರಮಕ್ಕೆ ಹೋದವಳು ಸನ್ಯಾಸತ್ವದ ಬಟ್ಟೆ ತೊಟ್ಕೊಂಡಿರೋದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ರುದ್ರಾಕ್ಷಿ ಮಾಲೆ ಹಾಕೊಂಡು, ಜಪ ಮಾಡ್ತಿರೋ ಬಿಪಾಶಾ, 11 ದಿನಗಳ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಬಿಟೌನ್​ಗೆ ವಾಪಸ್ ಬರಲಿ ಅನ್ನೋದು, ಅವ್ರ ಅಭಿಮಾನಿಗಳ ಆಶಯ..

Отправить комментарий

0 Комментарии