Hot Posts

10/recent/ticker-posts

ಈಗಲೂ ಲವ್ ಮಾಡ್ತಿದ್ದಾರೆ ರೇಖಾ-ಅಮಿತಾಬ್​?




ಆತ ಬಾಲಿವುಡ್​ನ ಌಂಗ್ರಿ ಮ್ಯಾನ್.. ಆಕೆ ಹಿಂದಿ ಚಿತ್ರರಂಗದ ಚಿರಯೌವನೆ.. ಅಮಿತಾಭ್​ ಹಾಗೂ ರೇಖಾ ಲವ್​ಸ್ಟೋರಿ ಬಾಲಿವುಡ್​ನ ಮೋಸ್ಟ್ ರೊಮ್ಯಾಂಟಿಕ್​ ಜೋಡಿ.. ಇವತ್ತಿಗೂ ಅಮಿತಾಬ್ ಸಿಕ್ಕೇ ಸಿಗ್ತಾರೆ ಅನ್ನೋ ಆಶಾವಅದದಲ್ಲಿ ಬದುಕು ದೂಡ್ತಿದ್ದಾರೆ. ರೇಖಾ ತನ್ನ ಹಣೆಗೆ ಈಗ್ಲೂ ಕುಂಕುಮ ಇಡೋದು, ಅಮಿತಾಬ್​ಗಾಗಿನೇ ಅಂತೆ..!

ಅಮಿತಾಭ್​-ರೇಖಾ.. ಒಂದು ಕಾಲಕ್ಕೆ ಹಿಂದಿ ಬೆಳ್ಳಿತೆರೆಯನ್ನಾಳಿದ, ಮೋಸ್ಟ್​ ರೊಮ್ಯಾಂಟಿಕ್​ ಜೋಡಿ ಕಣ್ರಿ.. ಅದಕ್ಕಿಂತ ಹೆಚ್ಚಾಗಿ ಈ ಜೋಡಿ ಸುದ್ದಿ ಮಾಡಿದ್ದು, ರಿಯಲ್​ ಲೈಫ್​ ಅಫೇರ್​ನಿಂದ.. ಮೂರು ದಶಕಗಳ ನಂತರವೂ, ಈ ಕುರಿತ ಚರ್ಚೆಗಳು ನಡೀತಾನೆ ಇವೆ.. ಬಾಲಿವುಡ್​ನ ಮೋಸ್ಟ್​ ಸೆನ್ಸೇಷನಲ್​ ಲವ್​ಸ್ಟೋರಿ ಅಂತಲೇ ಕರೆಸಿಕೊಳ್ಳೋ, ಅಮಿತಾಭ್​ ರೇಖಾ ಪ್ರೇಮ್​ಕಹಾನಿ, ಬಾಲಿವುಡ್​ನಲ್ಲಿ ಮತ್ತೆ ಮತ್ತೆ ಸದ್ದು ಮಾಡ್ತಾನೇ ಇರುತ್ತೆ.. ಅಮಿತಾಬ್​ರನ್ನು ಈಗ್ಲೂ ಕೂಡ ಹುಚ್ಚಿಯಂತೆ ಪ್ರೀತಿಸ್ತಿದ್ದಾರಂತೆ ಕಣ್ರಿ ಈ ರೇಖಾ.. ತನ್ನ ಬದುಕಿನ ಕೊನೆ ಕ್ಷಣದಲ್ಲಾದ್ರೂ, ಅಮಿತಾಬ್ ಸಿಗ್ತಾರೆ ಅನ್ನೋ ಆಶಾವಾದದಲ್ಲೇ ನಟಿ ರೇಖಾ ಬದುಕ್ತಾ ಇದ್ದಾರಂತೆ..

ನಟಿ ರೇಖಾ ಈಗ್ಲೂ ತನ್ನ ಹಣೆಗೆ ಕುಂಕುಮ ಇಡೋದು ತನ್ನ ಮನದರಸ ಅಮಿತಾಬ್​​ ಬಚ್ಚನ್​ಗಾಗಿಯಂತೆ..! ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ, ನಟಿ ರೇಖಾರ ಗೆಳತಿ ದೀಪಾಲಿ ಇಸ್ಸಾರ್​..

ಹೌದು.. ರೇಖಾ ಈಗಲೂ ಅಮಿತಾಬ್​ಗಾಗಿ ಶಬರಿಯಂತೆ ಕಾಯ್ತಾ ಇದ್ದಾರೆ. ಅವ್ರು ಈಗ್ಲೂ ಹಣೆಗೆ ಕುಂಕುಮ ಇಡೋದು ಅಮಿತಾಬ್​ಗಾಗಿನೇ ಅಂತ, ಖಾಸಗೀ ಮ್ಯಾಗಜಿನ್​ಗೆ ನೀಡಿದ ಸಂದರ್ಶನದಲ್ಲಿ, ಹೇಳಿದ್ದಾರೆ ದೀಪಾಲಿ ಇಸ್ಸಾರ್​..

ರೇಖಾ ಬದುಕಿನಲ್ಲಿ ಹಲವಾರು ಗಂಡಸರು ಬಂದು ಹೋದ್ರು.. ಸಪ್ತಪದಿ ತುಳಿದು ಆಕೆಯ ಹಣೆಗೆ ಕುಂಕುಮವಿಟ್ಟ ಮುಖೇಶ್​ ಅಗರ್​ವಾಲ್​ ಕೂಡ, ರೇಖಾ ಜೊತೆ ತುಂಬಾದಿನ ಉಳೀಲಿಲ್ಲ.. ಆದ್ರೆ ಅಮಿತಾಭ್​ ಮಾತ್ರ, ಅದ್ಯಾಕೆ ಆ ಪರಿ ಆಕೆಯನ್ನ ಕಾಡಿದ್ನೋ ಗೊತ್ತಿಲ್ಲ.. ರೇಖಾ ಆತನನ್ನ ಹುಚ್ಚನಂತೆ ಪ್ರೀತಿಸಿದ್ಲು.. ಆತನಿಗಾಗಿ ಹಂಬಲಿಸಿದ್ಲು.. ಅಷ್ಟೇ ಅಲ್ಲ ಇವತ್ತಿಗೂ ಅಮಿತಾಭ್​, ಆಕೆಯ ಹೃದಯ ಸಿಂಹಾಸನದ ರಾಜ.. ಆತನ ಪ್ರೀತಿಗಾಗಿ ಈಗ್ಲೂ ಕಾಯ್ತಾ ಇರೋ ಶಬರಿ ಈಕೆ..

ರೇಖಾ ಮತ್ತು ಬಿಗ್​ಬಿ ನಡುವಿನ ಪ್ರೇಮ್ ಕಹಾನಿಗೆ ಬರೋಬ್ಬರಿ 35 ವರ್ಷಗಳ ದೊಡ್ಡ ಇತಿಹಾಸವೇ ಇದೆ. ಅಮಿತಾಭ್​ ಹಾಗೂ ರೇಖಾ ಒಟ್ಟಿಗೆ ಕಾಣಿಸಿಕೊಂಡಿದ್ದು 1976ರಲ್ಲಿ ತೆರೆಕಂಡ ‘ದೋ ಅಂಜಾನ್​’ ಸಿನಿಮಾದಲ್ಲಿ.. ಈ ಮೊದಲು ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರೂ, ರೇಖಾಗೆ ಯಶಸ್ಸು ಅನ್ನೋದು ಮರೀಚಿಕೆಯಾಗಿ ಉಳಿದಿತ್ತು. ಆದ್ರೆ ದೋ ಅಂಜಾನೆ ಅಮಿತಾಬ್​ ಮತ್ತು ರೇಖಾಗೆ ದೊಡ್ಡ ಬ್ರೇಕ್ ನೀಡಿತ್ತು. ಇದಾದ ನಂತರ ಜಂಜೀರ್​ ಹಾಗೂ ದೀವಾರ್​ ಸಿನಿಮಾಗಳ ಯಶಸ್ಸು, ಅಮಿತಾಭ್​ರನ್ನ ಌಂಗ್ರಿ ಯಂಗ್​ ಮ್ಯಾನ್​ ಪಟ್ಟಕ್ಕೇರಿಸಿತ್ತು..

ಇದೇ ಟೈಮಲ್ಲೇ ನೋಡಿ, ರೇಖಾಗೆ ಅಮಿತಾಬ್​ ಮೇಲೆ ಮೊಹಬ್ಬತ್ ಶುರುವಾಗಿದ್ದು.. ಆದ್ರೆ ರೇಖಾಗೆ ಅಮಿತಾಬ್​ ಮೇಲೆ ಇಶ್ಕ್​​ ಶುರುವಾದಾಗ, ಅಮಿತಾಭ್​ ಮತ್ತು ಜಯ ಬಾಧುರಿಯ ಮದುವೆಯಾಗಿ ಮೂರು ವರ್ಷವಾಗಿತ್ತು..

ಅಮಿತಾಬ್ ಬಚ್ಚನ್ನೇ ನನ್ನ ಸಿಂಧೂರ ಅಂತ ಅನ್ಕೊಂಡಿದ್ದ ನಟಿ ರೇಖಾ ಹಣೆಗೆ, ಸಿಂಧೂರ ಇಟ್ಟದ್ದು ಮತ್ತೊಬ್ಬ ವ್ಯಕ್ತಿ.. ಆದ್ರೆ, ಆ ಸಿಂಧೂರ ಒಂದು ವರ್ಷ ಕೂಡ ಉಳೀಲಿಲ್ಲ.. ಯಾಕಂದ್ರೆ, ನಟಿ ರೇಖಾ ಬದುಕಲ್ಲಿ ದೊಡ್ಡ ಸುನಾಮಿನೇ ಎದ್ದು ಬಿಟ್ಟಿತ್ತು.. ಆ ರೋಚಕ ಕಥೆ ಮುಂದಿದೆ ಓದಿ
----------------------------------------------------------
ರೇಖಾ ಹುಚ್ಚಿಯಂತೆ ಪ್ರೀತಿಸ್ತಿದ್ಳು ನಿಜ.. ಆದ್ರೆ ಅಮಿತಾಭ್​ ಆಕೆಯ ಪ್ರೀತಿಯನ್ನ ಇವತ್ತಿಗೂ ಬಹಿರಂಗವಾಗಿ ಒಪ್ಪಿಕೊಳ್ಳೋ ಪ್ರಯತ್ನಾನೇ ಮಾಡ್ಲಿಲ್ಲ.. ಆದ್ರೆ ರೇಖಾ ಮಾತ್ರ, ಅಮಿತಾಭ್​ ಮೇಲಿದ್ದ ತನ್ನ ಪ್ರೀತಿಯನ್ನ ಆಗಾಗ ಬಹಿರಂಗಪಡಿಸಿದ್ಧಾರೆ. ಇವತ್ತಿಗೂ ಆತನಿಗಾಗಿನೇ ಕಾಯ್ತಿದ್ದಾಳೆ..

ರೇಖಾ ಮತ್ತು ಅಮಿತಾಭ್​​​ ಲವ್ ಸ್ಟೋರಿಗೆ ಮುನ್ನುಡಿಯಾಗಿದ್ದು 1976ರಲ್ಲಿ ತೆರೆಗೆ ಬಂದ ದೋ ಅಂಜಾನೆ ಸಿನಿಮಾ ಕಣ್ರಿ.. ಇದಾದ ನಂತರ ಗಂಗಾ ಕಿ ಸೌಗಂದ್​, ಮುಕದ್ಧರ್​ ಕಾ ಸಿಖಂದರ್, ಮಿಸ್ಟರ್​ ನಟ್ವರ್​ಲಾಲ್​, ಹೀಗೆ ಸಾಲು ಸಾಲು ಸಿನಿಮಾಗಳು ಬಂದ್ವು.. ಐದು ವರ್ಷಗಳಲ್ಲಿ ಅಮಿತಾಭ್​ ಹಾಗೂ ರೇಖಾ ಜೋಡಿ, ಬರೋಬ್ಬರಿ ಹತ್ತು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರು.. ಒಂದ್ ಲೆಕ್ಕದಲ್ಲಿ ಬಾಲಿವುಡ್​ ಮೋಸ್ಟ್​ ರೊಮ್ಯಾಂಟಿಕ್​ ಜೋಡಿ ಅನ್ನಿಸಿಕೊಂಡಿತ್ತು ಈ ಜೋಡಿ..

ಇವರಿಬ್ಬರ ನಡುವಿನ ರೀಲ್ ಲೈಫ್​ ಕೆಮಿಸ್ಟ್ರಿ, ರಿಯಲ್​ ಲೈಫ್​ನಲ್ಲೂ ಮುಂದುವರಿದಿತ್ತು. ಇದು ಜಯಾ ಬಚ್ಚನ್​ರ ಕಣ್ಣನ್ನು ಕೆಂಪಗಾಗಿಸಿತ್ತು. ಈ ಗಾಸಿಪ್​ಗಳಿಂದ ಅಮಿತಾಭ್​ ಮನೆಯಲ್ಲಿ ದೊಡ್ಡ ರಾದ್ದಾಂತವೇ ನಡೆದುಹೋಯ್ತು ಅನ್ನೋದು, ಒಂದು ಮೂಲದ ಮಾಹಿತಿ.. ಈ ಸುದ್ದಿಗೆ ಪುಷ್ಟಿ ನೀಡಿದ್ದು, ರಿಷಿಕಪೂರ್​ ಹಾಗೂ ನೀತು ಸಿಂಗ್​ ಮದುವೆ..

ಹೌದು.. 1979ರಲ್ಲಿ ನಡೆದ ರಿಷಿಕಪೂರ್​ ಹಾಗೂ ನೀತು ಸಿಂಗ್​ ಮದುವೆಯಲ್ಲಿ, ಇಡೀ ಹಿಂದಿ ಚಿತ್ರೋದ್ಯಮವೇ ನೆರೆದಿತ್ತು. ಆದ್ರೆ ಅಲ್ಲಿ ಎಲ್ಲರ ಕಣ್ಣು ಬಿದ್ದದ್ದು ನಟಿ ರೇಖಾ ಹಣೆ ಮೇಲೆ.. ಆವತ್ತು ರೇಖಾ ತನ್ನ ಹಣೆಯ ಮೇಲೆ ಇಟ್ಟಿದ್ದ ಸಿಂಧೂರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು..

ಮದುವೆಯಾಗಿರೋ ಹೆಣ್ಣಿನಂತೆ ಸಿಂಧೂರ ಇಟ್ಕೊಂಡು, ಮದುವೆಗೆ ಹೋಗಿದ್ಲು ರೇಖಾ.. ಇದರಿಂದ ರೇಖಾ ಹಾಗೂ ಅಮಿತಾಭ್​ ಮದುವೆಯಾಗಿದ್ದಾರೆ ಅಂತ ಪತ್ರಿಕೆಗಳಲ್ಲಿ ಸುದ್ದಿಯಾಯ್ತು.. ಈ ಬಗ್ಗೆ ಅಮಿತಾಭ್​ ಮಾತ್ರ ಎಲ್ಲಿಯೂ ಬಾಯಿ ಬಿಡ್ಲಿಲ್ಲ.. ಆದ್ರೆ ರೇಖಾ ಅಮಿತಾಭ್​ರನ್ನ ಹುಚ್ಚಿಯಂತೆ ಪ್ರೀತಿಸಿದ್ಲು ಅನ್ನೋದಕ್ಕೆ, ಆಕೆಯ ನಡವಳಿಕೆಯೇ ಸಾಕ್ಷಿ.. ನಾನು ಅಮಿತಾಭ್​ನನ್ನ ಪ್ರೀತಿಸ್ತಿದ್ದೀನಿ ಅನ್ನೋದು ಜಗತ್ತಿಗೆ ಗೊತ್ತಾಗ್ಲಿ ಅಂತಲೇ, ಮ್ಯಾಗಜೀನ್​ಗಳಲ್ಲಿ ಹುಚ್ಚುಚ್ಚಾಗಿ ಸಂದರ್ಶನಗಳನ್ನ ನೀಡ್ತಿದ್ಲು..

1984ರಲ್ಲಿ ರೇಖಾ ಸಂದರ್ಶನ ಪ್ರಕಟಿಸಿದ್ದ ಸ್ಟಾರ್ಡಸ್ಟ್ ಮ್ಯಾಗಜಿನ್​, ರೇಖಾ ತಾಯಿಯಾಗ್ತಿದ್ದಾಳೆ ಎಂಬ ಹೆಡ್​ಲೈನ್​ ಒಂದನ್ನ ಹಾಕಿತ್ತು.. ಇದು ರೇಖಾ ಮತ್ತು ಅಮಿತಾಭ್​ ಗುಟ್ಟಾಗಿ ಮದುವೆಯಾಗಿರಬಹುದಾ ಅನ್ನೋ ಅನುಮಾನಗಳನ್ನು ಹುಟ್ಟು ಹಾಕಿತ್ತು. ಇನ್ನು ಅದೇ ವರ್ಷ ಫಿಲ್ಮ್​ಫೇರ್​ ಮ್ಯಾಗಜೀನ್​ಗೆ ನೀಡಿದ್ದ ಇಂಟರ್​ವ್ಯೂನಲ್ಲಿ, ರೇಖಾ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ಳು.. ‘ನಾನು ಎಷ್ಟೇ ಆದ್ರೂ ಪತ್ನಿಯಲ್ಲ, ಮತ್ತೊಬ್ಬ ಮಹಿಳೆ ತಾನೆ.. ಇಂಥಾ ಮಾತಿನಿಂದ ತಂದೆ ತಾಯಿಗೆ ನಿಜಕ್ಕೂ ನಾಚಿಕೆಯಾಗುತ್ತೆ.. ಯಾವ ತಂದೆ ತಾಯಿಗೆ ತಾನೆ, ಇದರಿಂದ ಬೇಜಾರಾಗಲ್ಲ ಹೇಳಿ.. ಒಟ್ನಲ್ಲಿ ನನ್ನ ಜೀವನದಲ್ಲಿ ಏನ್​ ಆಗುತ್ತೋ, ಅದು ಆತನ ಕಾರಣದಿಂದಾಗಿ ಅನ್ನೋ ಮೂಲಕ, ತನ್ನ ಅಂತರಾಳದ ಭಗ್ನ ಪ್ರೇಮವನ್ನು ಹೊರ ಹಾಕಿದ್ಳು..

ರೇಖಾ ತನ್ನ ಸಿನಿಮಾಗಳಿಂದ ಸುದ್ದಿಮಾಡಿದ್ದಕ್ಕಿಂತ, ಸಿಲ್ಲಿಸಿಲ್ಲಿ ಗಾಸಿಪ್​ಗಳಿಂದ ಸುದ್ದಿಯಾಗಿದ್ದೇ ಹೆಚ್ಚು.. ಒಮ್ಮೆ ನಟ ಕಿರಣ್​ಕುಮಾರ್​ ಜೊತೆಗಿನ ಅಫೇರ್​ನಿಂದಾಗಿ ಸುದ್ದಿಯಾಗ್ತಿದ್ದ ರೇಖಾ, ಮತ್ತೊಮ್ಮೆ ವಿಶ್ವಜೀತ್​ ಜೊತೆಗಿನ ಕಿಸ್ಸಿಂಗ್​ನಿಂದಾಗಿ ಸುದ್ದಿಯಾಗಿದ್ಲು.. ಇದಾಗಿ ಕೆಲ ಸಮಯದ ನಂತರ, ನಟ ವಿನೋದ್​ ಮೆಹ್ರಾರನ್ನ ಮದುವೆಯಾದ್ರು ಎಂಬ ಸುದ್ದಿ ಕೂಡ, ಕಾಡ್ಗಿಚ್ಚಿನಂತೆ ಹರಡಿತ್ತು.. ನಂತರ ವಿನೋದ್​ ಮೆಹ್ರಾ ಜೊತೆ ವಿಚ್ಚೇಧನ ಪಡೆದ ಬಗ್ಗೆಯೂ ಗಾಸಿಪ್​ಗಳಿದ್ವು.. ಆದ್ರೆ ರೇಖಾ ಬದುಕಲ್ಲಿ, ಇಂದಿಗೂ ಭದ್ರವಾಗಿ ಉಳಿದ ಏಕೈಕ ವ್ಯಕ್ತಿ ಅಂದ್ರೆ, ಅದು ಅಮಿತಾಬ್​ ಬಚ್ಚನ್​ ಮಾತ್ರ..!

ಆದ್ರೆ ರೇಖಾ ಏನೇ ಮಾಡಿದ್ರೂ, ಅಮಿತಾಭ್​ ಮಾತ್ರ ಆಕೆಯ ಪಾಲಿಗೆ ದಕ್ಕಲಿಲ್ಲ... ಹೀಗಿದ್ರೂ, ಆಕೆ ಮನಸ್ಸಿನಲ್ಲಿ ಅಮಿತಾಬ್​ ಬಗೆಗಿನ ಪ್ರೀತಿ ಮಾತಯ್ರ ಕಡಿಮೆಯಾಗಲಿಲ್ಲ.. ಪ್ರೀತಿಗಾಗಿ ಪರಿತಪಿಸ್ತಿದ್ದ ಮನಸ್ಸಿಗೆ, ಆಸರೆಯಾದವನೇ, ಮುಖೇಶ್​​ ಅಗರ್​ವಾಲ್​..!

ತನ್ನ ಹಣೆಯ ಸಿಂಧೂರಕ್ಕೆ ಅಮಿತಾಬ್​ ವಾರಸುದಾರನಾಗ್ತಾನೆ ಅಂತ ರೇಖಾ ಕನಸು ಕಟ್ಟಿಕೊಂಡಿದ್ಳು.. ಆದ್ರೆ ಅಂತಿಮವಾಗಿ ರೇಖಾ ಹಣೆಗೆ ಅಧಿಕೃತವಾಗಿ ಸಿಂಧೂರ ಇಟ್ಟಿದ್ದು, ಉದ್ಯಮಿ ಮುಖೇಶ್​ ಅಗರ್ವಾಲ್..

ಮುಖೇಶ್​ ಅಗರ್​ವಾಲ್​​ ಜೊತೆ ರೇಖಾಗೆ ಮದುವೆಯೇನೋ ಆಯ್ತು..? ಆದ್ರೆ, ಒಂದೇ ವರ್ಷದಲ್ಲಿ ಮುಖೇಶ್​ ಅಗರ್​ವಾಲ್​​ ಆತ್ಮಹತ್ಯೆಗೆ ಶರಣಾಗಿದ್ದ. ಯಾಕೆ ಗೊತ್ತಾ..? ಮುಂದೆ ಓದಿ
---------------------------------------------
ಮ್ಯಾನ್ ಪ್ರಪೋಸಸ್.. ಗಾಡಿ ಡಿಸ್ಪೋಸಸ್​ ಅನ್ನೋ ಹಾಗೆ ಆಗಿತ್ತು ರೇಖಾ ಬದುಕು.. ಮುಖೇಶ್​ ಅಗರ್​ವಾಲ್​ ಜೊತೆ ರೇಖಾ ಮದುವೆಯಾಯ್ತು.. ಎಲ್ಲಾನೂ ಸುಖಾಂತ್ಯವಾಯ್ತು ಅನ್ನೋಷ್ಟ್ರಲ್ಲಿ, ದೊಡ್ಡ ಬಿರುಗಾಳಿನೇ ಎದ್ದುಬಿಟ್ಟಿತ್ತು. ಹಣೆಯ ಮೇಲಿನ ಸಿಂಧೂರದ ಅಧಿಪತಿಯೇ ರೇಖಾಗೆ ಇಲ್ಲವಾಗಿಬಿಟ್ಟ..!

ಯಾವ ಹೂವು ಯಾರ ಮುಡಿಗೋ.. ಯಾರ ಒಲವು ಯಾರ ಕಡೆಗೋ ಅನ್ನೋ ಹಾಗೆ, ರೇಖಾ ಬದುಕು ಬರ್ಬರವಾಗಿಬಿಡ್ತು ಕಣ್ರಿ.. ಹುಚ್ಚಿಯಂತೆ ಪ್ರೀತಿಸಿದ ಅಮಿತಾಬ್ ಬಚ್ಚನ್ ಕೂಡ ಈಕೆಗೆ ಒಲೀಲಿಲ್ಲ.. ಇದನ್ನೆಲ್ಲಾ ಮರೀಬೇಕು. ಹೊಸ ಬದುಕು ಕಟ್ಟಿಕೋಬೇಕು ಅಂತ 1990 ರಲ್ಲಿ ಮುಖೇಶ್​ ಅಗರ್​ವಾಲ್​ ಜೊತೆ ರೇಖಾ ವಿವಾಹವಾದ್ರು.. ಅಮಿತಾಭ್​ರ ಪ್ರೀತಿಯ ಹುಡುಕಾಟದಲ್ಲಿದ್ದ ರೇಖಾಗೆ, ಮುಖೇಶ್​ ಮೂಲಕ ಆ ಪ್ರೀತಿ ಸಿಕ್ತು ಅನ್ನುವಷ್ಟರಲ್ಲಿ, ರೇಖಾ ಬದುಕಿನಲ್ಲಿ ಮತ್ತೊಂದು ದುರಂತ ನಡೆದುಹೋಯ್ತು.. ವಿವಾಹವಾದ ಒಂದೇ ವರ್ಷದಲ್ಲಿ, ಮುಖೇಶ್​ ಆತ್ಮಹತ್ಯೆಗೆ ಶರಣಾಗಿದ್ರು..

ರೇಖಾಳ ದುಪಟ್ಟಾದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಮುಖೇಶ್ ಅಗರ್​ವಾಲ್​.. ನನ್ನ ಸಾವಿಗೆ ಯಾರೂ ಕಾರಣರಲ್ಲ ಅಂತ ಪತ್ರ ಕೂಡ ಬರೆದಿಟ್ಟಿದ್ರು ಕಣ್ರಿ.. ಇದು ರೇಖಾ ಬದುಕಿಗೆ ದೊಡ್ಡ ಹೊಡೆತವನ್ನೇ ನೀಡಿತ್ತು. ಪತಿಯ ಸಾವಿಗೆ ರೇಖಾ ಮೇಲೆನೇ ಗೂಬೆ ಕೂರಿಸಿದ್ರು ಎಲ್ಲರು.. ಯಾಕಂದ್ರೆ ಪತಿ ಆತ್ಮಹತ್ಯೆಗೆ ಶರಣಾಗಿದ್ದ ವೇಳೆ ರೇಖಾ ನ್ಯೂಯಾರ್ಕ್​ನಲ್ಲಿದ್ರು.ಆಕೆ ಅಲ್ಲಿ ಯಾರನ್ನ ಭೇಟಿ ಮಾಡೋಕೆ ಹೋಗಿದ್ರು ಅನ್ನೋದೇ ಇಂದಿಗೂ ಯಕ್ಷ ಪ್ರಶ್ನೆ..!

ಪತಿಯ ಸಾವಿನಿಂದಾಗಿ ಹಣೆಯ ಮೇಲಿದ್ದ ಸಿಂಧೂರವನ್ನೇ ಕಳೆದುಕೊಂಡಳು ರೇಖಾ.. ಇನ್ನೇನು ಆಕೆಯ ಬಾಳಲ್ಲಿ ಸಿಂಧೂರ ಇಡೋದಕ್ಕೆ ಆಗೋದೇ ಅಂತಿದ್ದ ಜನರಿಗೆ ಮತ್ತೆ ಶಾಕ್ ಕೊಟ್ಟಿದ್ದು ಇದೇ ಬೆಡಗಿ..

ಯಸ್.. 2008ರಲ್ಲಿ ಫಿಲ್ಮ್​ಫೇರ್​ ಸಮಾರಂಭಕ್ಕೆ ಬಂದಿದ್ದ ರೇಖಾ, ಆವತ್ತು ಹಣೆ ಮೇಲೆ ಸಿಂಧೂರ ಇಟ್ಕೊಂಡಿದ್ರು.. ರೇಖಾರ ಈ ನಡವಳಿಕೆ ಅಲ್ಲಿ ನೆರೆದಿದ್ದವರಿಗೆ ಶಾಕ್ ನೀಡಿತ್ತು..

ಇನ್ನು ಆ ಸಮಾರಂಭಕ್ಕೆ ನಟ ಅಮಿತಾಭ್​ ಕೂಡ ಬಂದಿದ್ರು.. ಅಮಿತಾಬ್ ಅಲ್ಲಿಗೆ ಬರ್ತಾರೆ ಅಂತ ರೇಖಾಗೆ ಮೊದ್ಲೇ ಗೊತ್ತಿತ್ತು.. ಹೀಗಾಗಿನೇ ತಮ್ಮ ಹಳೆಯ ಪ್ರೇಮದ ನೆನಪಿನ ಕುರುಹಾಗಿ ರೇಖಾ ಸಿಂಧೂರವಿಟ್ಕೊಂಡು ಸಮಾರಂಭಕ್ಕೆ ಬಂದಿದ್ರು..ಇದು ರೇಖಾ ಮತ್ತು ಅಮಿತಾಭ್​​ ನಡುವಿನ ಪ್ರೇಮ್​ಕಹಾನಿ ಇನ್ನೂ ಮುಂದುವರಿದಿದೆ ಅನ್ನೋದಕ್ಕೆ ಪುಷ್ಟಿ ನೀಡಿತ್ತು..

ಅಂದು ರೇಖಾ ಹಣೆಯ ಮೇಲೆ ಪ್ರೇಮದ ಕುರುಹಾಗಿ ಸಿಂಧೂರವಿಟ್ಟದ್ದು ಇದೇ ಅಮಿತಾಬ್​​ ಬಚ್ಚನ್.. ಆವತ್ತಿಂದ ಇವತ್ತಿನ ವರೆಗೂ ತಮ್ಮ ಪ್ರೇಮವನ್ನು ಸಿಂಧೂರದೊಂದಿಗೆ ಕಾಯ್ದುಕೊಂಡು ಬರ್ತಿದ್ದಾರೆ ರೇಖಾ.. ಪತಿ ಮುಖೇಶ್​ ಅಗರ್​ವಾಲ್​ ಸಾವಿನ ನಂತರವೂ ರೇಖಾ ಸಿಂಧೂರ ಇಡೋದನ್ನ ಬಿಟ್ಟಿಲ್ಲ.. ಯಾಕಂದ್ರೆ, ಈಗ ರೇಖಾ ಬದುಕ್ತಾ ಇರೋದು ಅಮಿತಾಬಚ್ಚನ್​​ರ ನೆನಪಿನಲ್ಲಿ.. ಹಣೆ ಮೇಲೆ ಸಿಂಧೂರ ಇಟ್ಕೊಳ್ತಾ ಇರೋದು ಕೂಡ ಅವರ ನೆನಪಿನಲ್ಲೇ..!

ಪ್ರತಿದಿನದ ಕೆಲಸಗಳಲ್ಲಿ ಏನನ್ನೂ ಬೇಕಾದ್ರೂ ಮರೀಬಹುದು ಕಣ್ರೀ ರೇಖಾ.. ಆದ್ರೆ ಅಮಿತಾಭ್​ರನ್ನು ನೆನೆದು ತಮ್ಮ ಹಣೆಯ ಮೇಲೆ ಸಿಂಧೂರವಿಟ್ಟುಕೊಳ್ಳೋದು ಮಾತ್ರ ಮರೆಯೋದಿಲ್ಲ.. ಈಗಲೂ ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿರೋದು ರೇಖಾ ಹಣೇಯ ಮೇಲಿರೋ ಈ ಸಿಂಧೂರ.. ತನ್ನ ಸೌಭಾಗ್ಯವಾಗಿ ಸಿಂಗಾರಗೊಂಡಿರೋದು ಕೂಡ ಇದೇ ಸಿಂಧೂರ..

ಬಿಗ್​​ಬಿ ತನ್ನ ಸಂಸಾರದೊಂದಿಗೆ ಆರಾಮಾಗಿದ್ದಾರೆ. ಆದ್ರೆ ರೇಖಾ ಮಾತ್ರ, ಇವತ್ತಲ್ಲಾ ನಾಳೆ ಆ ಪ್ರೀತಿ ಸಿಗಬಹುದು ಅಂತ 60 ವರ್ಷಗಳಿಂದ ಕಾಯ್ತಾ ಇದ್ದಾರೆ. ಬಿಗ್​ಬಿ ಹೆಸರಿನಲ್ಲೇ ಪ್ರತಿ ದಿನ ಸಿಂಧೂರವಿಟ್ಟುಕೊಳ್ತಿದ್ದಾರೆ. ಆ ಮೂಲಕ, ತನ್ನ ಪ್ರೇಮಿಯ ನೆನಪಿನೊಂದಿಗೆ ಕಲ್ಪನೆಗಳಲ್ಲೇ ಸಂಸಾರ ಮಾಡ್ತಿದ್ದಾರೆ.

Отправить комментарий

0 Комментарии