Hot Posts

10/recent/ticker-posts

ಕಿಚ್ಚನಿಗೆ ಬಾದಾಮಿಯಲ್ಲಿ ಶಾಕ್ ಕೊಟ್ಟ ಜನ! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ!









ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾದಾಮಿಗೆ ಪ್ರಚಾರಕ್ಕೆ ಬರುವ ಮೊದಲೇ ಅಲ್ಲಿನ ಜನ ಶಾಕ್ ಕೊಟ್ಟಿದ್ದಾರೆ. ಇದೇ ಮೇ 9ನೇ ತಾರೀಕು ಕಿಚ್ಚ ಸುದೀಪ್ ಬಾದಾಮಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಬಾದಾಮಿಗೆ ತೆರಳುವ ಮೊದಲೇ ಕಿಚ್ಚನಿಗೆ ಶಾಕ್ ಕೊಟ್ಟಿದ್ದಾರೆ ಸ್ಥಳೀಯರು.



ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಾದಾಮಿಗೆ ಬಂದರೆ, ನಾವು ಸುಮ್ಮನಿರುವುದಿಲ್ಲ ಎಂದು ವಾಲ್ಮೀಕಿ ಸಮುದಾದ ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳನ್ನು ಸೆಳೆಯಬಹುದು ಎಂದು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು. ಆದರೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕಿಚ್ಚ ಸುದೀಪ್ ಸಿದ್ದರಾಮಯ್ಯ ಪರ ಪ್ರಚಾರ ಮಾಡಬಾರದು ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.


ಬಾದಾಮಿಯಲ್ಲಿ ಕುರುಬರು ಮತ್ತು ವಾಲ್ಮೀಕಿ ಸಮುದಾಯ ಹೆಚ್ಚಾಗಿ ಇರೋದ್ರಿಂದ ಕುರುಬರ ಮತಗಳು ಸಿದ್ದರಾಮಯ್ಯಗೆ ಹೋಗೋ ಸಾಧ್ಯತೆ ಇದೆ. ವಾಲ್ಮೀಕಿ ಮತಗಳನ್ನು ಸೆಳೆಯಲು ವಾಲ್ಮೀಕಿ ಸಮುದಾಯದ ಶ್ರೀರಾಮುಲುರನ್ನೇ ಅಖಾಡಕ್ಕೆ ಇಳಿಸಿದೆ ಬಿಜೆಪಿ. ಇಂಥಾ ಟೈಮಲ್ಲೇ ನೋಡಿ, ಶ್ರೀರಾಮುಲು ಮತ್ತು ಬಿಜೆಪಿಗೆ ಶಾಕ್ ಕೊಡುವ ನಿಟ್ಟಿನಲ್ಲಿ ಮತ್ತು ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಸಿದ್ದರಾಮಯ್ಯ ಕಿಚ್ಚ ಸುದೀಪ್ ಅವರನ್ನು ಕರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಿಚ್ಚನ ಬರುವಿಕೆಯನ್ನು ಅರಿತ ವಾಲ್ಮೀಕಿ ಸಮುದಾಯದ ಜನ, ಸುದೀಪ್ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಈ ನೆಲಕ್ಕೆ ಸುದೀಪ್ ಕಾಲಿಡುವಂತಿಲ್ಲ. ಕಾಲಿಟ್ಟರೆ, ಅದು ವಾಲ್ಮೀಕಿ ಸಮುದಾಯಕ್ಕೆ ಮಾಡುವ ದ್ರೋಹ ಅಂತಿದ್ದಾರೆ.




Отправить комментарий

0 Комментарии