ಹಿಂದೂ ಸಂಪ್ರದಾಯದ ಪ್ರಕಾರ ನಾವು ಪ್ರಕೃತಿಯ ಆರಾಧಕರು.. ಮರ-ಗಿಡ, ಬೆಟ್ಟ ಗುಡ್ಡ, ಪ್ರಾಣಿ ಪಕ್ಷಿ ಎಲ್ಲದರಲ್ಲೂ ದೇವರನ್ನು ಕಾಣುವ ಪ್ರತೀತಿ ನಮ್ಮಲ್ಲಿದೆ.
ಹೀಗಾಗಿ ನಾಗ ದೇವರನ್ನೂ ಪೂಜಿಸುವ ಪ್ರತೀತಿ ಹಿಂದಿನಿಂದಲೂ ಬಂದಿದೆ.. ಈ ನಾಗಪಂಚಮಿಯನ್ನು ಶ್ರಾವಣ ಮಾಸದ ಪಂಚಮಿಯಂದು ಆಚರಿಸಲಾಗುತ್ತದೆ.
ಈ ದಿನದಂದು, ನಾಗ ದೇವತೆಯ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ನಾಗದೇವರಿಗೆ ಅರ್ಪಿಸುತ್ತಾರೆ. ಅಷ್ಟೇ ಅಲ್ಲ, ಉತ್ತರ ಕರ್ನಾಟಕಗದಲ್ಲಿ ಜೋಕಾಲಿಯಾಟ ಆಡುಹ ಹಬ್ಬ ಮತ್ತು ಅಣ್ಣ ತಂಗಿಯರ ಹಬ್ಬ ಎಂಬುದಾಗಿಯೀ ಕರೆಯಲಾಗುತ್ತದೆ. ತಂಗಿ ಅಥವ ಅಕ್ಕ, ಗಂಡನ ಮನೆಯಲ್ಲಿದ್ದರೆ ನಾಗರ ಪಂಚಮಿಯ ಹಬ್ಬಕ್ಕೆ ತಂಗಿಯನ್ನು ಕರೆಯಲು ಅಣ್ಣ ಬರುವ ವಾಡಿಕೆ ಇದೆ. ಹೀಗಾಗಿ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ
0 Комментарии